ಮಾ 31 ರ ವರೆಗೆ ಬಾರ್ ಗಳಿಗೆ ಬೀಗ ಹಿನ್ನಲೆ – ಉಡುಪಿಯಲ್ಲಿ ಮದ್ಯ ಖರೀದಿಸಿಲು ಮುಗಿಬಿದ್ದ ಜನತೆ

Spread the love

ಮಾ 31 ರ ವರೆಗೆ ಬಾರ್ಗಳಿಗೆ ಬೀಗ ಹಿನ್ನಲೆ – ಉಡುಪಿಯಲ್ಲಿ ಮದ್ಯ ಖರೀದಿಸಿಲು ಮುಗಿಬಿದ್ದ ಜನತೆ

ಉಡುಪಿ: ಈಗಾಗಲೇ ಮಾರ್ಚ್ 31 ರ ತನಕ ರಾಜ್ಯದಲ್ಲಿ ಯಾವುದೇ ಬಾರ್ ಹಾಗೂ ಪಬ್ಗಳನ್ನು ತೆರೆಯಬಾರದು ಎಂದು ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿದ್ದು ಶನಿವಾರ ನಗರದ ವಿವಿಧ ವೈನ್ ಶಾಪ್ ಗಳಲ್ಲಿ ಮದ್ಯವನ್ನು ಖರೀದಿಸಲು ಮದ್ಯ ಪ್ರಿಯರು ಮುಗಿಬಿದ್ದ ದೃಶ್ಯ ಕಂಡುಬಂತು.

ರವಿವಾರ ಜನತಾ ಕರ್ಫ್ಯೂ ಘೋಷಣೆಯ ಹಿನ್ನೆಲೆಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿನ ಅಂಗಡಿ ಮಳಿಗೆಗಳಲ್ಲಿ ದಿನಬಳಕೆಯ ಸಾಮಾಗ್ರಿಗಳ ಖರೀದಿಗೆ ಜನ ಮುಗಿ ಬಿದ್ದ ದೃಶ್ಯ ನಗರದ ವಿವಿಧ ಕಡೆಗಳಲ್ಲಿ ಕಂಡು ಬಂತು.

ಅಲ್ಲದೆ ಭಾನುವಾರ ದೇಶದಾದ್ಯಂತ ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಯಾವುದೇ ದಿನಸಿ ಸಾಮಾಗ್ರಿಗಳು ಸಿಗುವುದಿಲ್ಲ ಎಂಬ ಭಯದಿಂದ ನಗರದ ಕೇಂದ್ರ ಮಾರುಕಟ್ಟೆಯ ಬಳಿ ಜನರು ತರಕಾರಿ ಹಾಗೂ ಇತರ ವಸ್ತುಗಳನ್ನು ಖರೀದಿಸುತ್ತಿದ್ದರು.

ಭಾನುವಾರ ಸಾರಿಗೆ ಸಂಚಾರ ಕೂಡ ಬಂದ್ ಆಗುವ ಭಯದಿಂದ ಜನರು ಸರಕಾರಿ ಬಸ್ಸುಗಳಲ್ಲಿ ತಮ್ಮ ತಮ್ಮ ಊರಿಗೆ ತೆರಳುತ್ತಿದ್ದಾರೆ.


Spread the love