ಮೇ 18 ರಂದು  ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ  ಬ್ಯಾಂಕ್‍ ಗಳ ಸಮೀಕ್ಷಾ ಸಭೆ

Spread the love

ಮೇ 18 ರಂದು  ಸಂಸದ ನಳಿನ್ ಕುಮಾರ್ ಕಟೀಲ್ ಅವರಿಂದ  ಬ್ಯಾಂಕ್‍ ಗಳ ಸಮೀಕ್ಷಾ ಸಭೆ

ಮಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೇ 18 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ಬ್ಯಾಂಕರ್ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ನಡೆಸಲಿದ್ದಾರೆ.

ಮುದ್ರಾ ಸಾಲ ಯೋಜನೆಯಡಿ ಸಾಧನೆ, ಎಂ.ಎಸ್.ಎಂ.ಇ ಅಡಿಯಲ್ಲಿ ಕಾರ್ಯಕ್ಷಮತೆ, ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಕಾರ್ಯಕ್ಷಮತೆ, ಪಿ.ಎಂ.ಜೆ.ಡಿ.ವೈ ಯೋಜನೆಯಡಿ ಸಾಧನೆ, ಪ್ರಧಾನ ಮಂತ್ರಿ ಸಾಮಾಜಿಕ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಸಾಧನೆ, ಲಾಕ್ ಡೌನ್ ಅವಧಿಯಲ್ಲಿ ಹಣಕಾಸಿನ ನೆರವು ವಿಸ್ತರಣೆ ಕುರಿತು, ಮೀನುಗಾರಿಕೆ ಸಾಲ ಮನ್ನಾ ಯೋಜನೆಯಡಿ ಪ್ರಗತಿ ವ್ಮತ್ತಿತರ ವಿಷಯಗಳ ಬಗ್ಗೆ ಸಭೆ ನಡೆಯಲಿದೆ.


Spread the love