ಮೋದಿ ಸರಕಾರದ ಸಾಧನೆಗಳನ್ನು ರಮಾನಾಥ ರೈಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ : ದಕ ಜಿಲ್ಲಾ ಬಿಜೆಪಿ

Spread the love

ಮೋದಿ ಸರಕಾರದ ಸಾಧನೆಗಳನ್ನು ರಮನಾಥ ರೈಗಳಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ : ದಕ ಜಿಲ್ಲಾ ಬಿಜೆಪಿ
ಮಂಗಳೂರು : ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮನಾಥ ರೈರವರಿಗೆ ಕೇಂದ್ರ ಸಾಧನೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜಿ.ಎಸ್.ಟಿ ಕಾಯ್ದೆ ಯು.ಪಿ.ಎ ಸರಕಾರದ ಯೋಜನೆ ಎಂದು ಹೇಳುವ ಸಚಿವರು ಅದನ್ನು ಅನುಷ್ಠಾನಕ್ಕೆ ಯುಪಿಎ ಯಾಕೆ ತರಲಿಲ್ಲ ಎಂಬುದನ್ನು ಉತ್ತರಿಸಬೇಕು ಎಂದು ದಕ ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ್ ಪುತ್ತೂರು ಪ್ರಶ್ನಿಸಿದ್ದಾರೆ.
ಮಾಧ್ಯಮ ಪ್ರಕಟಣೆಯಲ್ಲಿ ಪ್ರಶ್ನಿಸಿಸಿರುವ ಅವರು ವಾಜಪೇಯಿಯವರು ಪ್ರಧಾನಿಗಳಾಗಿದ್ದ ಸಂಧರ್ಭದಲ್ಲಿ ಜಿ.ಎಸ್.ಟಿಯ ಬಗ್ಗೆ ನಿಯಮಾವಳಿಗಳನ್ನು ರೂಪಿಸಲು ಪ್ರತ್ಯೇಕ ತಂಡವನ್ನು ರಚಿಸಿ ಆದರ ಬಗ್ಗೆ ಶಿಫಾರಸ್ಸು ಮಾಡಲಾಗಿತ್ತಾದರು ಅದನ್ನು ಲೆಕ್ಕಿಸದೆ ಯು.ಪಿ.ಎ ಪ್ರತ್ಯೇಕ ತಂಡ ರಚಿಸಿದ್ದಾದರು ಯಾಕೆ ಎಂಬುದನ್ನು ಉತ್ತರಿಸಲಿ? ಇಷ್ಟಕ್ಕು ಯು.ಪಿ.ಎ ಕಾಲವಧಿಯಲ್ಲಿ ಮಂಡಿಸಲಾಗಿದ್ದ ಕಾಯ್ದೆಯಲ್ಲಿ ರಾಜ್ಯಗಳ ಅಧಿಕಾರವನ್ನು ಹತ್ತಿಕ್ಕಲಾಗಿತ್ತು. ಆದ್ದರಿಂದ ಅದು ಅನುಷ್ಠಾನಗೊಳ್ಳದೆ ಮೊಟಕುಗೊಂಡಿತ್ತು, ಇಂದು ಮೋದಿ ಸರಕಾರ ಜಾರಿಗೊಳಿಸುತ್ತಿರುವ ಜಿ.ಎಸ್.ಟಿ ಕಾಯ್ದೆಯಡಿಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ.ಇದು ಕಾಂಗ್ರೆಸ್ ಸರಕಾರದಿಂದ ಯಾಕೆ ಸಾಧ್ಯವಾಗಿರಲಿಲ್ಲ ಎಂಬುದನ್ನು ಸಚಿವರು ಉತ್ತರಿಸಲಿ.
ಅಪನಗದೀಕರಣದ ಬಗ್ಗೆ ಅಪಸ್ವರ ತೆಗೆದಿರುವ ಸಚಿವರಿಗೆ ಇದ್ದರಿಂದ ದೇಶಕ್ಕೆ ಸುಮಾರು 5 ಲಕ್ಷ ಕೋಟಿಗಳಷ್ಟು ಹಣ ಉಳಿತಾಯವಾಗಿದೆ ಎಂಬುದು ತಿಳಿದಿಲ್ಲದಂತೆ ತೋರುತ್ತದೆ.ಅಪನಗದೀಕರಣದ ನಂತರವು ಭಾರತದ ಜಿ.ಡಿ.ಪಿಯ ಪ್ರಮಾಣ ಕುಸಿತ ಕಾಣದೆ ಮುಂದುವರಿಯುತ್ತಿರುವುದೇ ಸಚಿವರ ಅಂಕಿ ಅಂಶಗಳು ಸುಳ್ಳು ಹೇಳುತ್ತಿವೆ ಎಂಬುದನ್ನು ಸಾಬೀತು ಪಡಿಸುತ್ತದೆ. ವಾಜಪೇಯಿಯವರ ಕಾಲದಲ್ಲಿ ಸುಮಾರು 5 ಕೋಟಿ ನೂತನ ಉದ್ಯೋಗಗಳು ಕೇವಲ 5 ವರ್ಷಗಳಲ್ಲಿ ಸೃಷ್ಟಿಯಾಗಿದ್ದವು, ಆದರೆ ಯು.ಪಿ.ಎ ಸರಕಾರದ ಅವಧಿಯಲ್ಲಿ ಈ ಪ್ರಮಾಣ ಶೇ.80ರಷ್ಟು ಕುಸಿತ ಕಂಡದ್ದು ಯಾಕೆ ಎಂಬುದನ್ನು ಸಚಿವರು ಉತ್ತರಿಸಲಿ. ಕೇಂದ್ರದ ಉದ್ಯೋಗಕ್ಕೆ ಒತ್ತು ಕೊಡವಂತಹ ಯೋಜನೆಗಳಾದ ಮೇಕ್ ಇನ್ ಇಂಡಿಯಾ ,ಸ್ಟಾರ್ ಅಪ್ ಇಂಡಿಯಾ,ಸ್ಟಾಂಡ್ ಅಪ್ ಇಂಡಿಯಾ, ಮುದ್ರಾ ಮುಂತಾದವುಗಳ ಮೂಲಕ ಸುಮಾರು 8 ಕೋಟಿ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂಬುದನ್ನು ಸಚಿವರಿಗೆ ತಿಳಿಹೇಳಬೇಕಿದೆ.
ಅಂಕಿ ಅಂಶಗಳೇ ಸಾಬೀತು ಪಡಿಸುವ ಹಾಗೆ ದೇಶದೆಲ್ಲೆಡೆ ಕೋಮುಗಲಭೆಗಳು ಕಡಿಮೆಯಾಗಿರುವುದು ಕಳೆದ ಮೂರು ವರ್ಷಗಳಿಂದ ಎಂಬ ಸತ್ಯವನ್ನು ರೈರವರು ತಿಳಿದುಕೊಳ್ಳಲಿ. ಅಂತೆಯೇ ರಷ್ಯ, ಅಮೇರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳ ಭಾರತದೊಂದಿಗಿನ ಸಂಬಂಧ ಯು.ಪಿ.ಎ ಸರಕಾರದ ನಿರ್ಲಕ್ಷ್ಯದಿಂದ ಹಳಿಸಿ ಹೋಗಿತ್ತು, ಆದರೆ ಅವಲ್ಲೆವು ಸುಧಾರಿಸಿರುವುದು ಕಾಂಗ್ರೆಸ್ಸಿಗರಿಗೆ ನೋಡುಲಾಗುತ್ತಿಲ್ಲ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಕೇಂದ್ರದಿಂದ ಉತ್ತಮ ಬಳುವಳಿ ದೊರಕಿದೆ. ದ.ಕ ಜಿಲ್ಲೆಗೆ ವಿವಿಧ ಯೋಜನೆಗಳಡಿಯಲ್ಲಿ ಸುಮಾರು ಹತ್ತು ಸಾವಿರ ಕೋಟಿಗಳಷ್ಟು ಹಣ ಹರಿದು ಬಂದಿರುವುದು ಇತಿಹಾಸ ನಿರ್ಮಿಸಿದೆ. 10 ವರ್ಷಗಳಲ್ಲಿ ಯು.ಪಿ.ಎ ಸರ್ಕಾರ ಬರಕ್ಕಾಗಿ ಕರ್ನಾಟಕಕ್ಕೆ ಕೊಟ್ಟ ಹಣಕ್ಕಿಂತ ಹೆಚಿನ ಪ್ರಮಾಣದಲ್ಲಿ ಮೋದಿಯವರು ಕೇವಲ ಮೂರು ವರ್ಷಗಳಲ್ಲಿ ಕೊಟ್ಟಿರುವುದು ಸರಕಾರದ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ.
ಅಭಿವೃದ್ಧಿ ಪಥದಲ್ಲಿ ಭಾರತ ಮುನ್ನುಗ್ಗುತ್ತಿದ್ದು ಕಾಂಗ್ರೆಸ್ ನಾಯಕರಿಗೆ ಸೋಲಿನ ಭೀತಿ ಕಾಡ ತೊಡಗಿದೆ. ಸನ್ಮಾನ್ಯ ಉಸ್ತುವಾರಿ ಸಚಿವರು ಕೇಂದ್ರದ ಬಗ್ಗೆ ಬೊಟ್ಟು ಮಾಡುವುದನ್ನು ನಿಲ್ಲಿಸಿ, ವಿಫಲವಾಗಿರುವ ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸ ಮಾಡಲಿ ಎಂದು ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು ಹೇಳಿದರು.


Spread the love