ಯುವ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಪುನರಾಯ್ಕೆ ; ದಕ ಯುವ ಜೆಡಿಎಸ್ ಸಿಹಿ ಹಂಚಿ ಸಂಭ್ರಮ

Spread the love

ಯುವ ರಾಜ್ಯಾಧ್ಯಕ್ಷರಾಗಿ  ಮಧು ಬಂಗಾರಪ್ಪ  ಪುನರಾಯ್ಕೆ ; ದಕ ಯುವ ಜೆಡಿಎಸ್ ಸಿಹಿ ಹಂಚಿ ಸಂಭ್ರಮ

ಮಂಗಳೂರು: ಕರ್ನಾಟಕ ಪ್ರದೇಶ ಯುವ  ಜನತಾದಳ (ಜಾತ್ಯತೀತ) ನೂತನ ರಾಜ್ಯಾಧ್ಯಕ್ಷರಾಗಿ  ಮಧು ಬಂಗಾರಪ್ಪ   ರವರು ಪುನರ್ ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಜೆಡಿಎಸ್ ಕಛೇರಿ ಮುಂಭಾಗದಲ್ಲಿ ಭಾನುವಾರ  ಪಟಾಕಿ ಸಿಡಿಸಿ ಸಿಹಿ ಹಂಚಿ ಹಾಗೂ ಅಶ್ರಮಕ್ಕೆ ಭೇಟಿ ನೀಡಿ ಸಿಹಿ ಹಂಚುವುದರೊಂದಿಗೆ ಸಂಭ್ರಮಿಸಲಾಯಿತು.

ಈ ವೇಳೆ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ ರವರು ಯುವಕರ ಕಣ್ಮಣಿ, ಬಡವರ ಬಂಧುವಾಗಿದ್ದ ತಂದೆ ಎಸ್ ಬಂಗಾರಪ್ಪರ ಮಗನಾಗಿ ನಾಯಕರನ್ನು ಸೃಷ್ಟಿಮಾಡುವ ನಾಯಕತ್ವದ ಗುಣವನ್ನು ಹೊಂದಿದ ಉನ್ನತ ಹೃದಯವಂತ ವ್ಯಕ್ತಿ ಮಧು ಬಂಗಾರಪ್ಪ. ರಾಜ್ಯದ ಯುವಕರ ಪಾಲಿಗೆ ಅಣ್ಣನ ಸ್ಥಾನದಲ್ಲಿದ್ದು, ರಾಜ್ಯ ಯುವ ಜೆಡಿಎಸ್ ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿರುವುದು ಅಭಿನಂದನೀಯ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಯುವಕರ ಪರವಾಗಿ ಹಾರ್ದಿಕ ಅಭಿನಂದನೆಗಳು.

ಮಾಜಿ ಮುಖ್ಯಮಂತ್ರಿ ಕುಮಾರಣ್ಣನ ಹೆಸರಿನಲ್ಲಿ ರಾಜ್ಯದಾದ್ಯಂತ ಯವಕರನ್ನು ಜೆಡಿಎಸ್ ನತ್ತ ಸೆಳೆಯುವ ಸಲುವಾಗಿ ಜಿಲ್ಲೆಯಾದ್ಯಂತ ಬೈಕ್ ರ್ಯಾಲಿ, ಯುವ ಸಮಾವೇಶಗಳನ್ನು ಮಾಡುವುದರ ಮೂಲಕ ರಾಜ್ಯದಲ್ಲಿ ಮತ್ತೋಮ್ಮೆ ಕುಮಾರಸ್ವಾಮಿ ನೇತೃತ್ವದ ಸರಕಾರ ರಚಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಗ್ರಾಮ ವಾಸ್ತವ್ಯ ಪ್ರತಿಯೊಬ್ಬರಿಗೂ ಮಾದರಿ. ಅವರ ಸಮ್ಮಿಶ್ರ ಸರಕಾರದಲ್ಲಿ ಅವರು ನೀಡಿದ ಜನಪರ ಯೋಜನೆಗಳನ್ನು ಪ್ರಚಾರ ಮಾಡುವುದರ ಮೂಲಕ ಯುವಜನರನ್ನು ಪಕ್ಷದತ್ತ ಸೆಳೆಯುವುದರೊಂದಿಗೆ ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿಯವರನ್ನು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿಸುವುದೇ ನಮ್ಮ ಗುರಿ ಎಂದರು.

 ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್ಶಕ್ ಇಸ್ಮಾಯಿಲ್, ಜಿಲ್ಲಾ ಕಾರ್ಯದರ್ಶಿಗಳಾದ ದೀಪಕ್, ನವಾಝ್ ಕುಪ್ಪೆಪದವು, ಸೀಯಾಬ್, ಕಲಂದರ್, ಸಿನಾನ್, ತೇಜಸ್ ನಾಯಕ್, ಔಸಫ್, ಮಹಮ್ಮದ್ ಅಬ್ದುಲ್ ಹಾದಿ, ದೀಕ್ಷಿತ್ ಅನೇಕರು ಉಪಸ್ಥಿತಿ ಇದ್ದರು


Spread the love

1 Comment

Comments are closed.