ರಾಜ್ಯ ಮಟ್ಟದಲ್ಲಿ ಮಿಂಚಿದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಾಂಸ್ಕೃತಿಕ ತಂಡ

Spread the love

ರಾಜ್ಯ ಮಟ್ಟದಲ್ಲಿ ಮಿಂಚಿದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಾಂಸ್ಕೃತಿಕ ತಂಡ

ಉಡುಪಿ: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ ಜಿಲ್ಲೆ, ವಲಯ ಮತ್ತು ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ತಂಡ ಅಗ್ರಸ್ಥಾನ ಪಡೆದಿದೆ.

cultural-team

ವಿಜಯಪುರದಲ್ಲಿ ಜರುಗಿದ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜಿನಿಂದ ಒಂಬತ್ತು ಮಂದಿಯ ತಂಡ ಭಾಗಹಿಸಿದ್ದು 4 ಪ್ರಥಮ ಹಾಗೂ 3 ದ್ವಿತೀಯ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವುದರೊಂದಿಗೆ ರಾಜ್ಯಕ್ಕೇ ಶ್ರೇಷ್ಠ ಸಾಂಸ್ಕೃತಿಕ ತಂಡವಾಗಿ ಹೊರಹೊಮ್ಮಿದೆ,

ಕನ್ನಡ ಚರ್ಚೆಯಲ್ಲಿ ಅಕ್ಷಯ್ ಹೆಗಡೆ, ದ್ವಿತೀಯ ಪಿಯುಸಿ., ಭಕ್ತಿಗೀತೆ ಯಲ್ಲಿ ಸಾಗರ್ ಪಿ, ದ್ವಿತೀಯ ಪಿಯುಸಿ ಆಶುಭಾಷಣದಲ್ಲಿ ದಿನೇಶ್ ಹೆಬ್ಬಾರ್, ದ್ವಿತೀಯ ಪಿಯುಸಿ ಮತ್ತು ಶಾಲಿಕ ಎಕ್ಕಾರ್, ಪ್ರಥಮ ಪಿಯುಸಿ ಪ್ರಥಮ ಸ್ಥಾನ ಗಳಿಸಿದರೆ, ಭಾವಗೀತೆಯಲ್ಲಿ ಮಾನಸ, ಪ್ರಥಮ ಪಿಯುಸಿ, ಇಂಗ್ಲಿಷ್ ಚರ್ಚೆಯಲ್ಲಿ ಲೀಲಾಧರ್, ಪ್ರಥಮ ಪಿಯುಸಿ ಮತ್ತು ಕನ್ನಡ ಚರ್ಚೆಯಲ್ಲಿ ವೈಷ್ಣವಿ ಗೋಪಾಲ್, ಪ್ರಥಮ ಪಿಯುಸಿ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಮಾತ್ರವಲ್ಲ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


Spread the love