ವೀರ ಗಾಥ 3.0 ಸ್ಪರ್ಧೆಯಲ್ಲಿ ಧೃತಿ ಎಸ್ ಆಯ್ಕೆ

Spread the love

ವೀರ ಗಾಥ 3.0 ಸ್ಪರ್ಧೆಯಲ್ಲಿ ಧೃತಿ ಎಸ್ ಆಯ್ಕೆ

ಉಡುಪಿ: ಭಾರತೀಯ ರಕ್ಷಣಾ ಇಲಾಖೆ ಹಾಗೂ ಭಾರತೀಯ ಶಿಕ್ಷಣ ಇಲಾಖೆಗಳ ಜಂಟಿ ಸಹಯೋಗದಲ್ಲಿ ಗ್ಯಾಲಂಟರಿ ಅವಾರ್ಡ್ಸ್ ಪೋರ್ಟಲ್ ಆಫ್ ಇಂಡಿಯಾ ಅಡಿಯಲ್ಲಿ ಆಯೋಜಿಸಲ್ಪಟ್ಟ ವೀರ ಗಾಥ3.0 ಸ್ಪರ್ಧೆಯಲ್ಲಿ ದೇಶದ 100 ವಿದ್ಯಾರ್ಥಿಗಳಲ್ಲಿ 6 ಮತ್ತು 8 ನೇ ತರಗತಿ ವಿಭಾಗದಲ್ಲಿ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ಇದರ 8 ನೇ ತರಗತಿ ವಿದ್ಯಾರ್ಥಿನಿ ಧ್ರತಿ ಎಸ್ ಆಯ್ಕೆಯಾಗಿರುತ್ತಾರೆ.

ಈ ಸ್ಪರ್ಧೆಯಲ್ಲಿ ದೇಶದ 2.43 ಲಕ್ಷ ಶಾಲೆಗಳಿಂದ 1.37 ಕೋಟಿ ವಿದ್ಯಾರ್ಥಿಗಳು 4 ವಿಭಾಗಳಲ್ಲಿ ವಿವಿಧ ವಿಷಯಗಳಲ್ಲಿ ಭಾಗವಹಿಸಿದ್ದು, ಚಿತ್ರಕಲಾ ಕ್ಷೇತ್ರದಲ್ಲಿ ದೃತಿ ಎಸ್ ರವರು ಸಲ್ಲಿಸಿದ ಚಿತ್ರವು ಆಯ್ಕೆಯಾಗಿದ್ದು ಬಹುಮಾನ ಲಭಿಸಿರುತ್ತದೆ.

ಬಹುಮಾನವನ್ನು ಪಡೆಯಲು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿದ್ದು, ಡಿಆರ್ ಡಿ ಒ ಭವನ ಸಭಾಂಗಣದಲ್ಲಿ ರಾಷ್ಟ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಾಷ್ಟ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರವರು ಹಾಗೂ ದೇಶದ ಸೇನೆಯ ಸರ್ವೋಚ್ಚ ನಾಯಕರುಗಳು ಉಪಸ್ಥಿತರಿದ್ದ ವೇದಿಕೆಯಲ್ಲಿ, ರಾಷ್ಟ್ರರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ವರಿಂದ ಪ್ರಶಸ್ತಿಯನ್ನು ಪಡೆಯಲಾಯಿತು.


Spread the love