ಶಾಸಕರು ಚುನಾವಣಾ ಗಿಮಿಕ್ಸ್ ನಿಲ್ಲಿಸಲಿ: ಜೆಡಿಎಸ್

Spread the love

ಶಾಸಕರು ಚುನಾವಣಾ ಗಿಮಿಕ್ಸ್ ನಿಲ್ಲಿಸಲಿ: ಜೆಡಿಎಸ್
ದಕ್ಷ ಪ್ರಮಾಣಿಕ ಐಪಿಎಸ್ ಅಧಿಕಾರಿಗಳಾದ ಮಧುಕರ್ ಶೆಟ್ಟಿರವರ ಹೆಸರನ್ನು ಮುಂದಿನ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಅಧಿಕಾರಕ್ಕೆ ಬಿಜೆಪಿ ಬಂದಲ್ಲಿ ಪ್ರಮುಖ ರಸ್ತೆಗೆ ಅವರ ಹೆಸರನ್ನು ಇಡಲಾಗುವುದು ಎಂಬ ಹೇಳಿಕೆ ಶಾಸಕರಾದ ವೇದವ್ಯಾಸ್ ಕಾಮತ್ ರವರ ಚುನಾವಣಾ ಗಿಮಿಕ್ಸ್ ಆಗಿದ್ದು ಅವರ ಪೊಳ್ಳು ಆಶ್ವಾಶನೆಯಾಗಿದೆ. ಇದು ಅವರ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಹೊಸ ಹುನ್ನಾರವಾಗಿದೆ. ಮಧುಕರ್ ಶೆಟ್ಟಿರವರ ಹೆಸರು ಕೇವಲ ಅಧಿಕಾರಕ್ಕೆ ಬಂದರೆ ಮಾತ್ರ ಸೀಮಿತವೇ? ಈ ಹೊಲಸು ರಾಜಕೀಯದ ಆಟವನ್ನು ಬಿಟ್ಟು ಅಧಿಕಾರವಿರಲಿ ಅಧಿಕಾರವಿಲ್ಲದಿರಲಿ ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯತಾರಾಗಿ ಅವರ ಸೇವೆಯನ್ನು ಪರಿಗಣಿಸಿ ಅವರ ಶಾಶ್ವತ ಹೆಸರನ್ನು ನೆನಪಿಸಿಕೊಳ್ಳಲು ಅವರ ಹುಟ್ಟೂರು ಅಥವಾ ರಾಜ್ಯದಲ್ಲಿ ಗುರುತಿಸಲ್ಪಡುವ ಪ್ರಮುಖ ಸ್ಥಳಗಳಲ್ಲಿ ಅವರ ಹೆಸರನ್ನು ಇಡಲು ಪ್ರಾಮಣಿಕ ಪ್ರಯತ್ನ ನಡೆಯಲಿ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ಮತ್ತು ದಕ್ಷಿಣ ವಿಧಾನ ಸಭ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ವಸಂತ್ ಪೂಜಾರಿ ತಿಳಿಸಿದ್ದಾರೆ.


Spread the love