ಶಾಸಕ ವೇದವ್ಯಾಸ ಕಾಮತರಿಂದ ಕನ್ನಗುಡ್ಡೆ ರಸ್ತೆ ಕಾಮಗಾರಿ ಪರಿಶೀಲನೆ

Spread the love

ಶಾಸಕ ವೇದವ್ಯಾಸ ಕಾಮತರಿಂದ ಕನ್ನಗುಡ್ಡೆ ರಸ್ತೆ ಕಾಮಗಾರಿ ಪರಿಶೀಲನೆ

ಮಂಗಳೂರು: ಕುಲಶೇಖರದ ಕನ್ನಗುಡ್ಡೆಯ ರಸ್ತೆ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪರಿಶೀಲಿಸಿದರು.

ಶುಕ್ರವಾರ ಸ್ಥಳಕ್ಕೆ ಆಗಮಿಸಿದ ಶಾಸಕರು ಅಧಿಕಾರಿಗಳನ್ನು ಕರೆಸಿ ಕಾಮಗಾರಿಯ ಕುರಿತು ಚರ್ಚಿಸಿದರು. ಕುಲಶೇಖರದಿಂದ ಉಮ್ಮಿಕಾನ್ ಸರಿಪಳ್ಳದ ಮೂಲಕ ಕೊಡಕಲ್ಲು ಪ್ರದೇಶಕ್ಕೆ ಹೋಗುವ ಈ ರಸ್ತೆ ಮುಂದಿನ ದಿನಗಳಲ್ಲಿ ಅಸಂಖ್ಯಾತ ಜನರಿಗೆ ಉಪಯೋಗಕ್ಕೆ ಬರಲಿದೆ.

ಶಾಸಕರೊಂದಿಗೆ ಬಿಜೆಪಿ ಮುಖಂಡರಾದ ಅಜಯ್, ವಸಂತ ಜೆ ಪೂಜಾರಿ, ನರೇಶ್ ಸರಿಪಲ್ಲ, ಪ್ರವೀಣ್ ಶೆಟ್ಟಿ ನಿಡ್ಡೇಲ್, ಸುರೇಶ್ ಆಚಾರ್, ಗೀತಾ ಶೆಟ್ಟಿ, ಗಾಯತ್ರಿ ಭಂಡಾರಿ, ಜೀವರಾಜ್, ಸುರೇಶ್ ಕನ್ನಗುಡ್ಡೆ, ಕಿಶೋರ್ ಕನ್ನಗುಡ್ಡ ಮುಂತಾದವರು ಉಪಸ್ಥಿತರಿದ್ದರು.


Spread the love