ಶ್ರೀ ನಿಕೇತನ ಕಪ್ ಮತ್ತು ಶ್ರೀನಿಕೇತನ ಪ್ರೀಮಿಯರ್ ಲೀಗ್ – 2023 ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಶ್ರೀ ನಿಕೇತನ ಕಪ್ ಮತ್ತು ಶ್ರೀನಿಕೇತನ ಪ್ರೀಮಿಯರ್ ಲೀಗ್ – 2023 ಆಮಂತ್ರಣ ಪತ್ರಿಕೆ ಬಿಡುಗಡೆ

ಬ್ರಹ್ಮಾವರ: ಶ್ರೀನಿಕೇತನ ಶಾಲೆ ಮಟಪಾಡಿ ಬ್ರಹ್ಮಾವರ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಶಾಲಾ ಶ್ರೇಯೋಭಿವೃದ್ಧಿಗಾಗಿ ಡಿಸೆಂಬರ್ 23 ರಂದು ಆಯೋಜಿಸಿರುವ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಕೂಟ ಶ್ರೀ ನಿಕೇತನ ಕಪ್ ಮತ್ತು ಶ್ರೀನಿಕೇತನ ಪ್ರೀಮಿಯರ್ ಲೀಗ್ – 2023 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಶಾಲಾ ಸಭಾಂಗಣದಲ್ಲಿ ನೆರವೇರಿತು.

ಆಮಂತ್ರಣ ಪತ್ರಿಕೆಯನ್ನು ಶ್ರೀನಿಕೇತನಪ್ರೌಢ ಶಾಲೆ ಮಟಪಾಡಿ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಶೆಟ್ಟಿ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರೌಢ ಶಾಲೆಯ ನಿವೃತ್ತ ಅಧ್ಯಾಪಕರಾದ ರವಿರಾಜ್ ಶೆಟ್ಟಿ, ದಿನಕರ್ ಶೆಟ್ಟಿ, ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶಿವರಾಮ ಶೆಟ್ಟಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರವೀಣ್ ಹೆಗ್ಡೆ, ಡಿಸೇಂಟ್ ಫ್ರೆಂಡ್ಸ್ ನ ಸುರೇಶ್ ಕರ್ಕೇರಾ, ಫ್ರೆಂಡ್ಸ್ ಮಟಪಾಡಿಯ ಶರತ್ ನಾಯಕ್, ಶಿವಾಜಿ ಫ್ರೆಂಡ್ಸ್ ನ ಸಂತೋಷ್, ವಾಲಿಬಾಲ್ ಪಂದ್ಯಾಕೂಟದ ಕಾರ್ಯಕಾರಿ ಸಮಿತಿಯ ಖಜಾಂಚಿ ಜೋಯ್ಸನ್ ಬಾಂಜ್, ಪ್ರಧಾನ ಕಾರ್ಯದರ್ಶೀ ಶರೋನ್ ಸಿಕ್ವೇರಾ ಉಪಸ್ಥೀತರಿದ್ದರು. ಚೇತನ್ ಪೂಜಾರಿ ಮಟಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


Spread the love