ಸಕಾಲ ಸೇವೆಯ ಜಾರಿಯಲ್ಲಿ ಸಾಧನೆ – ಪೊಲೀಸ್ ಕುಂದಾಪುರ ಉಪನಿರೀಕ್ಷಕ ಹರೀಶ್ ಗೆ ಪ್ರಶಂಸಾ ಪತ್ರ

Spread the love

ಸಕಾಲ ಸೇವೆಯ ಜಾರಿಯಲ್ಲಿ ಸಾಧನೆ – ಪೊಲೀಸ್ ಕುಂದಾಪುರ ಉಪನಿರೀಕ್ಷಕ ಹರೀಶ್ ಗೆ ಪ್ರಶಂಸಾ ಪತ್ರ

ಕುಂದಾಪುರ: ಸಕಾಲ ಸೇವೆಯ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಕುಂದಾಪುರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಹರೀಶ್ ನಾಯಕ್ ಇವರಿಗೆ ಜಿಲ್ಲಾಧಿಕಾರಿಗಳು ಪ್ರಶಂಸಾ ಪತ್ರವನ್ನು ನೀಡಿದ್ದಾರೆ.

ಸಕಾಲ ಸೇವೆಗಳ ಅಧಿನಿಯಮದಡಿ 122 ಸೇವೆಗಳನ್ನು ಕಾಲಮಿತಿಯಡಿ ರಾಜ್ಯದ ನಾಗರಿಕರಿಗೆ ಒದಗಿಸಿ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಸಕಾಲ ಸೇವೆಗಳ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹರೀಶ್ ನಾಯಕ್ ಅವರ ಕಾರ್ಯ ವೈಖರಿ ಪ್ರಶಂಸಿಸಿ ಸಕಾಲ ಮಿಷನ್ ವತಿಯಿಂದ ಜಿಲ್ಲಾಧಿಕಾರಿಗಳು ಅವರಿಗೆ ಪ್ರಶಂಸಾ ಪತ್ರ ವಿತರಿಸಿ ಗೌರವಿಸಿದ್ದಾರೆ.


Spread the love