ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿಯವರ ಸಂದೇಶದಲ್ಲಿ ಪರಿಹಾರವಿದೆ- ಬೈತಾರ್ ಸಖಾಫಿ ಸೌದಿ ಅರೇಬಿಯಾ:

Spread the love

ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿಯವರ ಸಂದೇಶದಲ್ಲಿ ಪರಿಹಾರವಿದೆ- ಬೈತಾರ್ ಸಖಾಫಿ

ಸೌದಿ ಅರೇಬಿಯಾ: ಕೆ.ಸಿ.ಎಫ್ ಅಲ್ ಹಸ್ಸಾ ಸೆಕ್ಟರ್ ಸೌದಿ ಅರೇಬಿಯಾ ಆಯೋಜಿಸಿದ ಕನ್ನಡಿಗರ ಸ್ನೇಹ ಸಂಗಮ ಬೃಹತ್ ಸಮಾವೇಶ ನಡೆಯಿತು.

snha-sangama

ಸೌದಿ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಬೈತಾರ್ ಯೂಸುಫ್ ಸಖಾಫಿ ಮುಖ್ಯ ಪ್ರಭಾಷಣದೊಂದಿಗೆ ಮಾತನಾಡುತ್ತಾ, ಪ್ರಚಲಿತ ಕಾಲದಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಸಂದೇಶ ಹೆಚ್ಚು ಔಚಿತ್ಯ ಮತ್ತು ಮಹತ್ವವನ್ನು ಪಡೆದಿದೆ, ಆರೋಗ್ಯವಂತ ಸಮಾಜ, ನಿರ್ಭೀತಿಯ ಜೀವನ ಮತ್ತು ದೈನಂದಿನ ಅನುಕೂಲಾವಸ್ಥೆ ಈ ಮೂರು ಅವಸ್ಥೆಯು ಸಮಾಜದಲ್ಲಿರಬೇಕೆಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರು ಬಯಸಿದರು ಮತ್ತು ಅದರ ಸಾತ್ಕಾರಕ್ಕಾಗಿ ಪ್ರವರ್ತಿಸಿದರು, ಆಧುನಿಕ ಚಿಂತಕರೂ ಮಹಾನ್ ವ್ಯಕ್ತಿಗಳು ಕೂಡಾ ಪ್ರವಾದಿ ಮುಹವ್ಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ವ್ಯಕ್ತಿತ್ವವನ್ನು ಬಹಳ ಕೊಂಡಾಡಿದ್ದಾರೆ, ಅವರ ಸಂದೇಶದ ಮಹತ್ವವನ್ನು ಅಂಗೀಕರಿಸಿದ್ದುದನ್ನು ಕಾಣಬಹುದು ಎಂದು ಸಾಧಾರವಾಗಿ ವಿವರಿಸಿದರು. ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿಯವರ ಸಂದೇಶದಲ್ಲಿ ಸೂಕ್ತ ಪರಿಹಾರ ವಿದೆ, ಪ್ರಸ್ತುತ ಸಂದೇಶವನ್ನು ಪಾಲಿಸುವುದರಲ್ಲಿ ನಾವು ಮುಂಚೂಣಿಯಲ್ಲಿರಬೇಕೆಂದು ನೆರೆದ ಜನಸ್ತೋಮಕ್ಕೆ ಕರೆನೀಡಿದರು

ನಂತರ ಮಾತನಾಡಿದ ಅಸ್ಸಯ್ಯದ್ ತುರಾಬ್ ಸಖಾಫ್ ತಂಙಳ್ ರವರು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸರಳವಾದ ಜೀವನ ಚರಿತ್ರೆಯನ್ನು ಮನಮುಟ್ಟುವಂತೆ ತೆರೆದಿಟ್ಟರು.

ಗಲ್ಫ್ ಮಾಸ ಪತ್ರಿಕೆಯಾದ ಇಶಾರ ಅಭಿಯಾನವನ್ನು ತುರಾಬ್ ತಂಙಳ್ ರವರು ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ PR WING ಅಧ್ಯಕ್ಷರಾದ ಆಸಿಫ್ ಗೂಡಿನಬಳಿ ರವರಿಗೆ ನೀಡುವ ಮೂಲಕ ಚಾಲನೆ ನೀಡಿದರು.

ನಂತರ “ಓ.ಖಾಲಿದ್ – ಪ್ರಶಸ್ತಿ” ಯನ್ನು ಕೆ.ಸಿ.ಎಫ್ ಅಲ್ ಹಸ್ಸಾ ಖಜಾಂಜಿ ಅಬ್ದುಲ್ ರಹ್ಮಾನ್ ಕೈರಂಗಳ ಅವರಿಗೆ ತುರಾಬ್ ತಂಙಳ್ ಹಸ್ತಾಂತರಿಸಿದರು.

ದಮ್ಮಾಮ್ ಕೆ.ಸಿ.ಎಫ್ ತಂಡದಿಂದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್ ರವರ ಮದ್ಹ್ ಗಾನ ಆಲಾಪಿಸಿದರು. ಜೊತೆಗೆ ಮಕ್ಕಳ ಕಾರ್ಯಕ್ರಮವೂ ನಡೆಯಿತು.

ಸಮಾಜಸೇವೆಯಲ್ಲಿ ಗುರುತಿಸಲ್ಪಟ್ಟ ಮುಹ್ಯದ್ದೀನ್ ಅಡ್ಡೂರ್ ಮತ್ತು ಅಶ್ಪಾಕ್ ಮಂಜೇಶ್ವರ ಅವರಿಗೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ INC ನಾಯಕರಾದ NS ಅಬ್ದುಲ್ಲಾ, ಮುಹಮ್ಮದ್ ಮಲೆಬೆಟ್ಟು, ಕೆ.ಸಿ.ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಕಾರ್ಯದರ್ಶಿ ಫಾರೂಖ್ ಕಾಟಿಪಳ್ಳ, ದಮ್ಮಾಮ್ ಝೋನಲ್ ಅಧ್ಯಕ್ಷ ಅಬ್ದುಲ್ ಅಝೀಝ್ ಸಅದಿ, ಸೌದಿ ಅರೇಬಿಯಾ PR WING ಕನ್ವೀನರ್ ಅಶ್ರು ಬಜ್ಪೆ, ದಮ್ಮಾಮ್ ಝೋನಲ್ ಕಾರ್ಯದರ್ಶಿ ಫೈಝಲ್ ಕೃಷ್ಣಾಪುರ, ಅಲ್ ಹಸ್ಸಾ ನಾಯಕರಾದ ಝಕರಿಯಾ ಸಅದಿ, ಮುಹಿಯದ್ದೀನ್ ಅಡ್ಡೂರ್, DKSC ನಾಯಕ ಅಝೀಝ್ ಆತೂರ್, ICF, RSC ನೇತಾರರು ಉಪಸ್ಥಿತಿತರಿದ್ದರು.

ಮದೀನಾ, ರಿಯಾದ್, ದಮ್ಮಾಮ್, ಅಲ್ ಖೋಬರ್, ಜುಬೈಲ್, ಅಲ್ ಹಸ್ಸಾದ ಸಕ್ರಿಯ ಕಾರ್ಯಕರ್ತರು ಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

ಝಕರಿಯಾ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಇಸ್ಹಾಕ್ ಫಜೀರ್ ನಿರೂಪಿಸಿದರು. ಹಾರೀಸ್ ಕಾಜೂರ್ ಸ್ವಾಗತಿಸಿ, ಇಕ್ಬಾಲ್ ಗುಲ್ವಾಡಿ ಧನ್ಯವಾದಗೈದರು.


Spread the love