ಸಾಲಿಗ್ರಾಮದಲ್ಲಿ ಭಾಗವತ ದಿ| ಕಾಳಿಂಗ ನಾವುಡ ಪ್ರತಿಮೆ ಸ್ಥಾಪನೆ ಅವಕಾಶಕ್ಕೆ ಜನಸೇವಾ ಟ್ರಸ್ಟ್ ಮನವಿ

Spread the love

ಸಾಲಿಗ್ರಾಮದಲ್ಲಿ ಭಾಗವತ ದಿ| ಕಾಳಿಂಗ ನಾವುಡ ಪ್ರತಿಮೆ ಸ್ಥಾಪನೆ ಅವಕಾಶಕ್ಕೆ ಜನಸೇವಾ ಟ್ರಸ್ಟ್ ಮನವಿ

ಕೋಟ: ಯಕ್ಷಗಾನದ ಯುಗಪ್ರವರ್ತಕ ದಿ| ಜಿ. ಕಾಳಿಂಗ ನಾವುಡದರ ನೆನಪು ಚಿರಸ್ಥಾಯಿಯಾಗಿಸುವ ಸಲುವಾಗಿ ಅವರ ಹುಟ್ಟೂರು ಗುಂಡ್ಮಿ ಸಮೀಪದ ಮುಖ್ಯಪೇಟೆ ಸಾಲಿಗ್ರಾಮದಲ್ಲಿ ನಾವುಡರ ಪ್ರತಿಮೆ ಸ್ಥಾಪಿಸುವ ಇಚ್ಛೆಯನ್ನು ಜನಸೇವಾ ಟ್ರಸ್ಟ್ ಹೊಂದಿದ್ದು ಇದಕ್ಕೆ ಸ್ಥಳೀಯಾಡಳಿತ ಅನುಮತಿ ನೀಡಬೇಕು ಎಂದು ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಸದಸ್ಯರು ಸಾಲಿಗ್ರಾಮ ಪ.ಪಂ. ಮುಖ್ಯಾದಿಕಾರಿ ಅರುಣ್ ಕುಮಾರ್ ಅವರಿಗೆ ಮಾ.17ರಂದು ಮನವಿ ಸಲ್ಲಿಸಿದರು.

ನಾವುಡರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದು ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅವಿಚ್ಛಿನ್ನವಾದದ್ದು. ಆದರೆ ಅವರ ಪ್ರತಿಮೆಯೊಂದನ್ನು ಸ್ಥಾಪಿಸಿ ಗೌರವಿಸುವ ಕಾರ್ಯ ಇದುವರೆಗೆ ನಡೆದಿಲ್ಲ. ಹೀಗಾಗಿ ಸಾಲಿಗ್ರಾಮದ ಮುಖ್ಯ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಲು ಜನಸೇವಾ ಟ್ರಸ್ಟ್ ಸಿದ್ಧವಿದ್ದು ಸ್ಥಳೀಯಾಡಳಿತ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಮುಖ್ಯಾದಿಕಾರಿಗಳು ಈ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಟ್ರಸ್ಟ್ ನ ಮುಖ್ಯಸ್ಥರಾದ ಉದಯ ಶೆಟ್ಟಿ ಪಡುಕರೆ, ವಸಂತ್ ಗಿಳಿಯಾರು, ಪ್ರವೀಣ್ ಯಕ್ಷಿಮಠ, ನಾಗರಾಜ್ ಶೆಟ್ಟಿ ನೈಕಂಬ್ಳಿ, ಉಮೇಶ್ ಶೆಟ್ಟಿ ಕಲ್ಗದ್ದೆ ಮುಂತಾದವರು ಉಪಸ್ಥಿತರಿದ್ದರು.


Spread the love