ಸುರತ್ಕಲ್ ನಲ್ಲಿ ಯುವಕನ ಹತ್ಯೆ; ಮೂವರ ಬಂಧನ

Spread the love

ಸುರತ್ಕಲ್ ನಲ್ಲಿ ಯುವಕನ ಹತ್ಯೆ; ಮೂವರ ಬಂಧನ

ಮಂಗಳೂರು : ಸುರತ್ಕಲ್ ನಲ್ಲಿರುವ ಬಾರೊಂದರ ಸಮೀಪ ಯುವಕನ ಕೊಲೆ ಘಟನೆ ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ.

ಮೃತರನ್ನು ಗುಡ್ಡೆಕೊಪ್ಲ ನಿವಾಸಿ ಸಂದೇಶ್ (30) ಮೃತ ಯುವಕ ಎಂದು ಗುರುತಿಸಲಾಗಿದೆ.

ಸುರತ್ಕಲ್ ಜಂಕ್ಷನ್ ಬಳಿಯಿರುವ ಬಾರ್ ಮುಂಭಾಗ ಈ ಘಟನೆ ನಡೆದಿದೆ. ಗೆಳೆಯರ ನಡುವೆ ಉಂಟಾದ ಭಿನ್ನಾಭಿಪ್ರಾಯವೇ ಕೊಲೆಗೆ ಕಾರಣ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಕಾರಣರಾದ ಆರೋಪಿಗಳಾದ ರಾಜ, ಗಣೇಶ್ ಮತ್ತು ಸುಹೇಲ್ ಎಂಬವರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love