ಸೂಲಿಬೆಲೆಗೆ ಅವಮಾನ; ಸಚಿವ ರಮಾನಾಥ ರೈ ವಿರುದ್ದ ರಹೀಮ್ ಉಚ್ಚಿಲ್ ಖಾಸಗಿ ದೂರು ದಾಖಲು

Spread the love

ಸೂಲಿಬೆಲೆಗೆ ಅವಮಾನ; ಸಚಿವ ರಮಾನಾಥ ರೈ ವಿರುದ್ದ ರಹೀಮ್ ಉಚ್ಚಿಲ್ ಖಾಸಗಿ ದೂರು ದಾಖಲು

ಮಂಗಳೂರು: ಯುವ ಬ್ರಿಗೇಡ್ ನಾಯಕ ಚಕ್ರವರ್ತಿ ಸೂಲಿಬೇಲೆ ವಿರುದ್ದ ಅವಮಾನಕರ ಹೇಳಿಕೆ ನೀಡಿದ್ದ ದಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಿರುದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಮ್ ಉಚ್ಚಿಲ್ ಅವರು ಖಾಸಗಿ ದೂರನ್ನು ದಾಖಲಿಸಿದ್ದಾರೆ.

ಸಪ್ಟೆಂಬರ್ 22 ರಂದು ಅಸೈಗೋಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಸಚಿವ ರಮಾನಾಥ ರೈ ಅವರು ನೆಹರು ಕುಟುಂಬದ ವಿರುದ್ದ ಮಾತನಾಡುವ ಸೂಲಿಬೇಲೆ ವಿರುದ್ದ ಕೆಟ್ಟ ಪದಗಳನ್ನು ಸಚಿವರು ಬಳಸಿದ್ದರು. ಸಚಿವರು ಬಳಸಿದ ಪದದಿಂದ ನೋವಾಗಿದ್ದು, ಅವರ ಮಾತನಾಡಿದ ವೀಡಿಯೋ ವೈರಲ್ ಆಗಿದ್ದು ಇದರಿಂದ ಸೂಲಿಬೇಲಿಯವರಿಗೆ ಅವಮಾನ ಮಾಡಿದ್ದಾರೆ ಆದ್ದರಿಂದ ಸಚಿವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ರಹೀಮ್ ಉಚ್ಚಿಲ್ ಅವರ ದೂರನ್ನು ದಾಖಲಿಸಿಕೊಂಡಿರುವ ನ್ಯಾಯಾಲಯ ಸಪ್ಟೆಂಬರ್ 27 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.


Spread the love