ಸೇನಾ ನೇಮಕಾತಿ- ಅಭ್ಯರ್ಥಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ

Spread the love

ಸೇನಾ ನೇಮಕಾತಿ- ಅಭ್ಯರ್ಥಿಗಳಿಗೆ ಉಡುಪಿ ಜಿಲ್ಲಾಡಳಿತದಿಂದ ವಿಶೇಷ ಬಸ್ ಸೌಲಭ್ಯ

ಉಡುಪಿ: ಮೇ 12 ರಿಂದ 18 ರವರೆಗೆ ವಿಜಯಪುರದಲ್ಲಿ ನಡೆಯಲಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಉಡುಪಿ ಜಿಲ್ಲೆಯಿಂದ ಭಾಗವಹಿಸಲಿರುವ ಅಭ್ಯರ್ಥಿಗಳ ವಿಜಯಪುರ ಪ್ರಯಾಣಕ್ಕಾಗಿ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಬಸ್ ಒದಗಿಸಲಾಗಿದ್ದು, ಮೇ 14 ರ ಬೆಳಗ್ಗೆ 6 ಗಂಟೆಗೆ ಉಡುಪಿಯಿಂದ ಬಸ್ ಹೊರಡಲಿದೆ.

ಆನ್‍ಲೈನ್ ಮೂಲಕ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ನೊಂದಾಯಿಸಿಕೊಂಡ ಉಡುಪಿ ಜಿಲ್ಲೆಯ ಅಭ್ಯರ್ಥಿಗಳು ಮೇ 13 ರ ಸಂಜೆಯೊಳಗಾಗಿ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಲು ತಿಳಿಸಿದೆ.
ಸದರಿ ಬಸ್ ಮೇ 14 ರಂದು ವಿಜಯಪುರದಲ್ಲಿ ತಂಗಲಿದ್ದು ಅಭ್ಯರ್ಥಿಗಳು ಮೇ 15 ರಂದು ಅದೇ ಬಸ್ಸಿನಲ್ಲಿ ಮರುಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ನೊಂದಾಯಿತ ಅಭ್ಯರ್ಥಿಗಳು ಈ ವಿಶೇಷ ಸೌಲಭ್ಯದ ಅನುಕೂಲವನ್ನು ಪೂರ್ಣಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love