ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ- ಕರಡು ಅಧಿಸೂಚನೆ ಪ್ರಕಟ

Spread the love

ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ- ಕರಡು ಅಧಿಸೂಚನೆ ಪ್ರಕಟ

ಉಡುಪಿ: ಉಡುಪಿ ಜಿಲ್ಲೆಯ 2011 ರ ಜನಸಂಖ್ಯೆ ಗಣತಿಯನ್ವಯ ಭೌಗೋಳಿಕ ಸಾಮೀಪ್ಯ, ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ ಹಾಗೂ ಎಲ್ಲಾ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತಾತ್ಮಕ ಹಿತದೃಷ್ಠಿಯಿಂದ, ಜಿಲ್ಲೆಯ ಉಡುಪಿ ನಗರಸಭೆ, ಕಾರ್ಕಳ ಪುರಸಭೆ, ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್‍ಗಳ ಕ್ಷೇತ್ರ ವಿಂಗಡಣೆಯನ್ನು ಅಂತಿಮಗೊಳಿಸ ಬೇಕಾಗಿರುವುದರಿಂದ, ಎಲ್ಲಾ ವಾರ್ಡ್‍ಗಳ ವ್ಯಾಪ್ತಿ ಪ್ರದೇಶವನ್ನು ಗಡಿ ಗುರುತುಗಳ ಸಮೇತ ಪುನರ್ ವಿಂಗಡಣೆ ಮಾಡಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ಈ ಕರಡು ಅಧಿಸೂಚನೆಯು ಸಂಬಂದಪಟ್ಟ ಎಲ್ಲಾ ಸ್ಥಳಿಯ ಸಂಸ್ಥೆಗಳ ಕಛೇರಿಯಲ್ಲಿ ಲಭ್ಯವಿರುತ್ತದೆ. ಈ ಕರಡು ವಿಂಗಡಣೆಯ ಬಗ್ಗೆ ಸಾರ್ವಜನಿಕರು ಯಾವುದೇ ಆಕ್ಷೇಪ ಅಥವಾ ಸಲಹೆ ಸೂಚನೆಗಳಿದ್ದಲ್ಲಿ ಏಪ್ರಿಲ್ 6 ರ ಒಳಗಾಗಿ ಸೂಕ್ತ ದಾಖಲೆ ಹಾಗೂ ಪೂರ್ಣ ವಿಳಾಸದೊಂದಿಗೆ ಉಡುಪಿ ಜಿಲ್ಲಾಧಿಕಾರಿರವರ ಕಚೇರಿಗೆ ಹಾಗೂ ಸಂಬಂದಪಟ್ಟ ಸ್ಥಳಿಯ ಸಂಸ್ಥೆಗಳ ಕಚೇರಿಗೆ ಸಲ್ಲಿಸುವಂತೆ ಹಾಗೂ ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲಾ ಆಕ್ಷೇಪಣೆ, ಮನವಿ ಹಾಗೂ ಸಲಹೆಗಳನ್ನು ಪರಶೀಲಿಸಿ ನಂತರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.


Spread the love