ಸ್ನಾನಕ್ಕೆ ತೆರಳಿದ ಮೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

Spread the love

ಸ್ನಾನಕ್ಕೆ ತೆರಳಿದ ಮೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

ಮಂಗಳೂರು: ಸ್ನಾನಕ್ಕೆಂದು ನದಿಗಿಳಿದ  ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಸೋಮವಾರ ಮಧ್ಯಾಹ್ನ ಇನೋಳಿ ಬಳಿ ನಡೆದಿದೆ.

ನೀರುಪಾಲದ ವಿದ್ಯಾರ್ಥಿಗಳನ್ನು ಶ್ರೀರಾಮ್ (21), ನಿಖಿಲ್ (22) ಮತ್ತು ಶುಭಂ (21) ಎಂದು ಗುರುತಿಸಲಾಗಿದೆ.

ಸೋಮವಾರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದು, ಇವರು ಸ್ನಾನ ಮುಗಿಸಿ ಹಿಂತಿರುಗುವಾಗ ಶ್ರೀರಾಮ್ ಎನ್ನುವ ವಿದ್ಯಾರ್ಥಿ ಕಾಲು ಜಾರಿ ನದಿಗೆ ಬಿದ್ದಿದ್ದು ಆತನ ರಕ್ಷಣೆಗೆ ಹೋದ ಉಳಿದಿಬ್ಬರು ವಿದ್ಯಾರ್ಥಿಗಳು ಸಹ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋದರೆನ್ನಲಾಗಿದೆ.

ಘಟನಾ ಸ್ಥಳಕ್ಕೆ ಕೊಣಾಜೆ ಠಾಣಾ ಪೋಲಿಸರು ತೆರಳಿದ್ದು ಶೋಧ ಕಾರ್ಯ ಮುಂದುವರೆದಿದೆ.


Spread the love