ಸ್ವಚ್ಛಭಾರತ ಮಿಷನ್: ಜಿಲ್ಲೆಯ 4 ಬೀಚ್ ಶುಚಿಗೊಳಿಸಿದ ಗಾರ್ನಿಯರ್
ಗೋಕರ್ಣ/ ಕಾರವಾರ: ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವ, ಮರುಬಳಕೆ ಮಾಡುವ ಮತ್ತು ಸಂಸ್ಕರಣೆ ಮಾಡುವ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ತನ್ನ ಸುಸ್ಥಿರತೆಯ ಬದ್ಧತೆಗಳನ್ನು ಬಲಪಡಿಸುವ ಉದ್ದೇಶದಿಂದ ಸ್ವಚ್ಛಭಾರತ್ ಮಿಷನ್ ಜತೆ ಕೈಜೋಡಿಸಿರು ಗಾರ್ನಿಯರ್ ಜಿಲ್ಲೆಯ ನಾಲ್ಕು ಬೀಚ್ಗಳಲ್ಲಿ ಇತ್ತೀಚೆಗೆ ಸ್ವಚ್ಛತಾ ಕಾರ್ಯ ಕೈಗೊಂಡಿತು.
ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್, ಅಂಕೋಲಾದ ಗೋಕರ್ಣ ಬೀಚ್, ಹೊನ್ನಾವರದ ಮುರುಡೇಶ್ವರ ಬೀಚ್, ಕುಮಟಾದ ವಾನಳ್ಳಿ ಬೀಚ್ ಸೇರಿದಂತೆ ಭಾರತದಾದ್ಯಂತ 21 ಬೀಚ್ಗಳಲ್ಲಿ ‘ಬೀಚ್ ಸ್ವಚ್ಛತಾ ಅಭಿಯಾನ’ ಕೈಗೊಂಡಿತು.
ಮುಂಬೈ, ಚೆನ್ನೈ, ವಿಶಾಖಪಟ್ಟಣ, ಪುದುಚೇರಿ, ಪುರಿ, ಗೋವಾ, ಮಂಗಳೂರು ಮತ್ತು ಕಾಸರಗೋಡು ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ವಿದ್ಯಾರ್ಥಿ ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
‘ಪ್ಲಾಸ್ಟಿಕ್ಸ್ ಫಾರ್ ಚೇಂಜ್’ ಸಹಭಾಗಿತ್ವದಲ್ಲಿ ಭಾರತದಾದ್ಯಂತ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಒಳಗೊಂಡಿರುವ ‘ಗಾರ್ನಿಯರ್’ನ ‘ಗ್ರೀನ್ ಬ್ಯೂಟಿ’ ಪಯಣದಲ್ಲಿ ಇದು ಒಂದು ಮೈಲುಗಲ್ಲಾಗಿದೆ ಎಂದು ‘ಸ್ವಚ್ಛ ಭಾರತ್ ಮಿಷನ್-ನಗರ’ ಯೋಜನೆಯ ಜಂಟಿ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಯೋಜನಾ ನಿರ್ದೇಶಕಿ ರೂಪಾ ಮಿಶ್ರಾ ಮತ್ತು ‘ಗಾರ್ನಿಯರ್ ಇಂಡಿಯಾ’ದ ಪ್ರಧಾನ ವ್ಯವಸ್ಥಾಪಕ ಅಜಯ್ ಸಿಂಹ ಹೇಳಿದ್ದಾರೆ.
2020ರಿಂದ ‘ಗಾರ್ನಿಯರ್’, ಪ್ಲಾಸ್ಟಿಕ್ ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ‘ಪ್ಲಾಸ್ಟಿಕ್ಸ್ ಫಾರ್ ಚೇಂಜ್’ ಜತೆ ಪಾಲುದಾರಿಕೆ ಹೊಂದಿದೆ. ಇದೇ ವೇಳೆ, ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು, ತ್ಯಾಜ್ಯ ಉದ್ಯಮಿಗಳು ಮತ್ತು ಅವರ ಕುಟುಂಬಗಳಿಗೆ ಸ್ಥಿರ ಆದಾಯ ಗಳಿಸಲು ಮತ್ತು ಅವರ ಒಟ್ಟಾರೆ ಜೀವನೋಪಾಯ ಸುಧಾರಿಸಲು ಅನುವು ಮಾಡಿಕೊಡುತ್ತಿದೆ.
ಇದು ಚಿಂದಿ ಆಯುವವರ ಆರ್ಥಿಕ ಸೇರ್ಪಡೆ, ವಸತಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಪ್ರವೇಶದ ಮೂಲಕ, ಸಮುದಾಯದ 15,000 ಸದಸ್ಯರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಪ್ರಕಟಣೆ ತಿಳಿಸಿದೆ.