ಹಳೆ ಕಳ್ಳತನದ ಮೂವರು ಆರೋಪಿಗಳ ಬಂಧನ- ಸೊತ್ತುಗಳ ವಶ

Spread the love

ಹಳೆ ಕಳ್ಳತನದ ಮೂವರು ಆರೋಪಿಗಳ ಬಂಧನ- ಸೊತ್ತುಗಳ ವಶ

ಮಂಗಳೂರು: ಹಳೆ ಕಳ್ಳತನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರನ್ನು ಮುಂಡಾಜೆ ಗ್ರಾಮದ ಸತೀಶ್ @ಸ್ಕಾರ್ಪಿಯೊ ಸತೀಶ್ (33), ಪುತ್ತೂರು ನಿವಾಸಿ ರವಿ @ ಪುಟ್ಟು ರವಿ @ ಜೀತು (29) ಮತ್ತು ಕುಡುಪಿ ನಿವಾಸಿ ಹರೀಶ್ ಪೂಜಾರಿ (29) ಎಂದು ಗುರುತಿಸಲಾಗಿದೆ.

ಶನಿವಾರ ಸಿಪಿಐ ಬೆಳ್ತಂಗಡಿ ಮತ್ತು ತಂಡ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡ ಮಾರುತಿ 800 ಕಾರು ಕೆಎ.19.ಎನ್.8397 ರನ್ನು ತಪಾಸಣೆ ನಡೆಸಿ ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆರೋಪಿಗಳ ವಿರುದ್ದ ವೇಣೂರು, ಧರ್ಮಸ್ಥಳ ಠಾಣೆಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಆಪಾದಿತರಾಗಿರುತ್ತಾರೆ.

ಆಪಾದಿತರುಗಳಿಂದ ಒಟ್ಟು 115 ಗ್ರಾಂ ತೂಕದ ಚಿನ್ನಾಭರಣಗಳು, ಒಟ್ಟು 61 ಗ್ರಾಂ ಬೆಳ್ಳಿಯ ಆಭರಣಗಳು, ಲ್ಯಾಪ್ ಟ್ಯಾಪ್ ಮತ್ತು ಮೊಬೈಲ್ ವಶಪಡಿಸಲಾಗಿದೆ ಹಾಗೂ ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ 02 ಸಂಖ್ಯೆಯ ಮೊಟಾರು ಸೈಕಲ್ ಗಳು, 01 ಸಂಖ್ಯೆಯ ಮಾರುತಿ 800 ಕಾರು , 04 ಸಂಖ್ಯೆಯ ಮೊಬೈಲ್ ಗಳನ್ನು ವಶಪಡಿಕೊಳ್ಳಲಾಗಿದೆ. ವಶಪಡಿಸಲಾದ ವಸ್ತುಗಳ ಒಟ್ಟು ಮೌಲ್ಯ ರೂಪಾಯಿ 5,50,000 ಆಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love