ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಶ್ರಮ ಪಕ್ಷಕ್ಕೆ ವರದಾನ- ಡಿ ವೇದವ್ಯಾಸ ಕಾಮತ್

Spread the love

ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಶ್ರಮ ಪಕ್ಷಕ್ಕೆ ವರದಾನ- ಡಿ ವೇದವ್ಯಾಸ ಕಾಮತ್

ಮಂಗಳೂರು : ರಾಜ್ಯದ ಮುಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಸಂಘದ ಸಂಪರ್ಕಕ್ಕೆ ಕರೆ ತಂದ ಮ.ಚ.ಚಂದ್ರಹಾಸ್ ಅವರು ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಶ್ರಮಜೀವಿಗಳ ಸಮರ್ಥ ಮಾರ್ಗದರ್ಶನ ಮತ್ತು ಯುವ ಪೀಳಿಗೆಯ ಅವಿರತ ಶ್ರಮದಿಂದ ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಏರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಚಿಲಿಂಬಿ ವಾರ್ಡಿನ 77 ಮತ್ತು 78 ನೇ ಬೂತಿನಲ್ಲಿ ನಡೆದ ಜನಸಂಪರ್ಕ ಹಾಗೂ ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಭೆಯಲ್ಲಿ ಮ.ಚ.ಚಂದ್ರಹಾಸ್, ವಿನಯ್ ಎಲ್ ಶೆಟ್ಟಿ, ಸೂರಜ್, ಅರುಣ್, ಸುಧಾಕರ್ ಉಪಸ್ಥಿತರಿದ್ದರು. ಬಳಿಕ ನವಾಯತ್ ಮತ್ತು ಜಪ್ಪಿನಮೊಗರು ವಾರ್ಡ್ ನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕಾರ್ಯಕರ್ತರು ಮತ್ತು ನಾಗರಿಕರು ವಾರ್ಡ್ ಗಳ ವಿವಿಧ ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ವೇದವ್ಯಾಸ್ ಕಾಮತ್ ಅವರ ಗಮನಕ್ಕೆ ತಂದರು.

ವೈಕುಂಠ ಭಕ್ತ, ಎಂ ದಿನೇಶ್ ಕಾಮತ್, ವಿಠಲ ಕುಡ್ವ, ವಿಜೇಂದ್ರ, ರಮೇಶ್ ಹೆಗ್ಡೆ, ಸುರೇಂದ್ರ, ವೀಣಾ ಮಂಗಲ, ಸುಮತಿ, ವಿಮಲೇಶ್ ರಾವ್, ವಿದ್ಯಾ ಸುವರ್ಣ, ಸ್ನೇಹ, ಸಂಜಯ್, ಕಿರಣ್ ರೈ, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.


Spread the love