ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

Spread the love

ಹೆಮ್ಮಾಡಿ: ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

ಕುಂದಾಪುರ: ಇಲ್ಲಿನ ವಿ.ವಿ.ವಿ ಮಂಡಳಿ ಆಡಳಿತದ ಜನತಾ ಪ್ರೌಢ ಶಾಲೆಯಲ್ಲಿ ಸೈನ್ಸ್ ವರ್ಲ್ಡ್ ಲ್ಯಾಬ್ ಕುಂದಾಪುರ ಇವರು ನಿರ್ಮಾಣ ಮಾಡಿದ ವಿಜ್ಞಾನ ಪ್ರಯೋಗಾಲಯದ ಉದ್ಘಾಟನಾ ಸಮಾರಂಭವು ಗುರುವಾರ ಜರುಗಿತು.

ವಿ.ವಿ.ವಿ ಮಂಡಳಿಯ ನಿರ್ದೇಶಕ, ಉದ್ಯಮಿ ಸಂದೀಪ ಪೂಜಾರಿ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿ ಗ್ರಾಮೀಣ ಭಾಗದ ಅನುದಾನಿತ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವಂತಹ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯದ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭ ವಿ.ವಿ.ವಿ ಮಂಡಳಿಯ ಅಧ್ಯಕ್ಷ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಉಪಾಧ್ಯಕ್ಷ ಎಸ್. ರಾಜು ಪೂಜಾರಿ,‌ ನಿರ್ದೇಶಕರಾದ ರಘುರಾಮ್ ಪೂಜಾರಿ, ಶೀನ ಪೂಜಾರಿ, ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಭಟ್ , ಮುಖ್ಯೋಪಾಧ್ಯಾಯ ಮಂಜು ಕಾಳಾವರ್, ರತ್ತು ಬಾಯಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಆನಂದ‌ ಮದ್ದೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ‌ ನಂದಿ ದೇವಾಡಿಗ, ಕಾರ್ಯದರ್ಶಿ ರಾಘವೇಂದ್ರ ಕುಲಾಲ್, ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ, ಕುಂದಾಪುರದ ಸೈನ್ಸ್ ವರ್ಲ್ಡ್ ಲ್ಯಾಬ್ ನ ಕಿರಣ್ ದೇವಾಡಿಗ ಜಾಲಾಡಿ, ವಿಜ್ಞಾನ ಶಿಕ್ಷಕ ಮಹೇಂದ್ರ ದೇವಾಡಿಗ ಉಪಸ್ಥಿತರಿದ್ದರು‌.


Spread the love