Spread the love
ಮಾದಕ ವಸ್ತು ಸೇವನೆ ಆರೋಪ: ನಾಲ್ಕು ಮಂದಿ ಸೆರೆ
ಮಂಗಳೂರು : ನಗರದ ಪೊಲೀಸ್ ಕಮಿಷನರೆಟ್ನ ನಾನಾ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆಗೈದ ಆರೋಪಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯೆಯ್ಯಾಡಿ ಕ್ರಾಸ್ ಬಳಿಯಿಂದ ನಿನಾದ್ ಕೋಟ್ಯಾನ್ ಎಂಬಾತನನ್ನು ಕದ್ರಿ ಪೊಲೀಸರು, ನಗರದ ಅಂಬೇಡ್ಕರ್ ವೃತ್ತದ ಬಳಿ ಕುಲಶೇಖರದ ಪ್ರತೀಕ್ ಯಾನೆ ಪ್ರತೀಕ್ ಕೊಟ್ಟಾರಿ ಎಂಬಾತನನ್ನು ಬಂದರು ಪೊಲೀಸರು, ಸೋಮೇಶ್ವರ ಗ್ರಾಮದ ಪಿಲಾರ್ ಗ್ರೌಂಡ್ ಬಳಿ ಕಲಂದರ್ ಶಾಫಿ ಎಂಬಾತನನ್ನು ಉಳ್ಳಾಲ ಪೊಲೀಸರು, ಶಿವ ನಗರದ ಮುಳಿಹಿತ್ಲು ಬಳಿ ಪವನ್ ಜೆರಾಲ್ಡ್ ಎಂಬಾತನನ್ನು ಪಾಂಡೇಶ್ವರ ಠಾಣೆ ಪೊಲೀಸರು ಬಂಧಿಸಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Spread the love













