ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಯೋಗ- ಸ್ವಾಮಿ ಯುಗೇಶನಂದಾಜೀ

Spread the love

ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಯೋಗ- ಸ್ವಾಮಿ ಯುಗೇಶನಂದಾಜೀ

ಮAಗಳಾದೇವಿಯ ಶ್ರೀ ರಾಮಕೃಷ್ಣ ಮಠದಲಿ ಎರಡು ವಾರಗಳ [ಜುಲೈ ತಿಂಗಳ-2026] ಕಾಲ ಜರುಗುವ ಸಂಜೆಯ ಯೋಗ [5 ಗಂಟೆಯ] ಶಿಬಿರವನ್ನು ರಾಮಕೃಷ್ಣ ಮಠ, ಮಂಗಳೂರು ಇಲ್ಲಿಯ ಬಾಲಕಾಶ್ರಮದ ವಾರ್ಡನ್ ಆಗಿರುವ ಸ್ವಾಮಿ ಯುಗೇಶನಂದಾಜೀ ಉದ್ಘಾಟಿಸಿ, ತಮ್ಮ ಆಶೀರ್ವಚನದಲ್ಲಿ ನಮ್ಮ ಭಾರತೀಯ ಕಲೆಯಾದ “ಯೋಗ” ವನ್ನು ತನ್ನ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಬಹಳಷ್ಟು ಸಹಕಾರಿಯಾಗಬಹುದು. ಏಕಕಾಲಕ್ಕೆ ಹಲವು ಕೆಲಸ ಕಾರ್ಯಗಳ ಒತ್ತಡವಿದ್ದರೂ ಮನಸನ್ನು ನಿಯಂತ್ರಣಗೊಳಿಸುವ ವಿಧಾನ ಗೊತ್ತಿದ್ದರೆ ಸಮರ್ಪಕವಾಗಿ ತನ್ನ ಕೆಲಸ ಕಾರ್ಯಗಳನ್ನು ಹಾಯಾಗಿ ಆರಾಮವಾಗಿ ನಿರ್ವಹಿಸಬಹುದು. ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗವನ್ನು ವ್ಯಕ್ತಿಯು ತನ್ನ ಜೀವನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡರೆ ನೆಮ್ಮದಿಯ ಬಾಳುವೆಗೆ ಸೋಪಾನವಾಗುವುದು. ಧ್ಯಾನ ಮತ್ತು ಪ್ರಾಣಾಯಾಮದಿಂದ ಕೂಡಿದ “ಯೋಗ” ವನ್ನು ಮಾಡುವುದರಿಂದ ಶರೀರದ ಪ್ರತಿಯೊಂದು ಅಂಗಾAಗಗಳಿಗೆ ನವಚೈತನ್ಯ ಒದಗಿ ದೈಹಿಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಹಾಗೂ ತಾಳ್ಮೆ, ಶಾಂತಿ ಒದಗಿ ಸಹಜವಾಗಿ ನರಮಂಡಲ ಚೈತನ್ಯ ಶೀಲವಾಗುತ್ತದೆ. ಎಂದು ತಿಳಿಸಿದರು.

ದೇಲಂಪಾಡಿ ಯೋಗ ಪ್ರತಿಷ್ಠಾನದÀ ಯೋಗ ಗುರು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಶಿಬಿರಾರ್ಥಿಗಳಿಗೆ ಯೋಗದ ಮಹತ್ವÀ ಪ್ರಯೋಜನಗಳನ್ನು ತಿಳಿಸಿದರು ಪತಂಜಲಿ ಋಷಿಗಳು ತಮ್ಮ ಯೋಗಶಾಸ್ರö್ತದಲ್ಲಿ ನಾಲ್ಕು ಅಧ್ಯಾಯಗಳ ಮೊದಲ ಅಧ್ಯಾಯದ ಸಮಾಧಿ ಪಾದದಲ್ಲಿ ಈ ಸೂತ್ರವನ್ನು ಹೇಳಿದ್ದಾರೆ.ಯೋಗದ ಅಧ್ಯಾಯನ ಮತ್ತು ಅಭ್ಯಾಸದ ಪರಿಚಯವಾಗಿದೆ. ಅಥಃ ಎಂದರೆ ವಿವರಣೆಯನ್ನು ಪರಿಚÀಯಿಸಲು ಹೆಚ್ಚಾಗಿ ಬಳಸಲಾಗುತ್ತದೆ. ಯೋಗ ಎಂದರೆ ಏಕತೆ, ಸಾಮರಸ್ಯ, ಅನುಶಾಸನಂ ಎಂದರೆ ಅನುಭವದ ಪರಿಚಯ ಸೂಚನೆ ಶಿಸ್ತು ಆಗಿದೆ. ಮಂತ್ರವಾಗಿ ಬಳಸಬಹುದು ಮೊದಲ ಹಂತಗಳು ಯಾವಾಗಲೂ ಕಠಿನವಾಗಿದೆ. ಯೋಗ ಅಧಿವೇಶನವನ್ನು ಪ್ರಾರಂಭಿಸುವ ಅನುಭವಿ ಯೋಗಿಯಾಗಿದ್ದರೂ ಯೋಗದ ಅಭ್ಯಾ¸ಕ್ಕೂ ಇದು ಅನ್ವಯಿಸುತ್ತದೆ. ಏಕಾಗ್ರತೆ ಮತ್ತು ಅಲೋಚನೆಯ ಕಾರ್ಯದ ಮೂಲಕ ತಿಳಿದುಕೊಳ್ಳುವುದು. ಯೋಗಕ್ಕೆ ಸಂಬAದಿಸಿದAತೆ ಸೂಚನೆಗಳು ಅಥವಾ ಪೂರ್ವಶಿಸ್ತು, ಅಶುದ್ದ ಮನಸ್ಸು ಮತ್ತು ಅಲೆದಾಡುವ ಪ್ರವೃತ್ತಿ ಇರುವವರು ಈ ಶಾಸ್ತçದಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಅಭ್ಯಾಸವಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಇಲ್ಲಿ ಶಿಸ್ತಿನ ಗುಣಮಟ್ಟ ಹೆಚ್ಚು ಮುಖ್ಯ ಎಂದು ತಿಳಿಸಿದರು.

ಶ್ರೀ ದೇಲಂಪಾಡಿ ಶಿಷ್ಯರಾದ, ಭಾರತಿ,ಕಾರ್ತಿಕ್, ತುಕರಾಮ, ಚಂದ್ರಹಾಸ ಬಾಳ ಹಾಗೂ ಪ್ರೇಮ ಪಧ್ಮಾವತಿ ಹಾಗೂ ವಿ.ಪ್ರೇಮ ಇವರು ಸಹಕರಿಸಿದರು. ಆಸಕ್ತರು ನೋಂದಾಯಿಸಿಕೊಳ್ಳಲು ಆಶ್ರಮದ ಕಾರ್ಯಾಲವನ್ನು ಸಂಪರ್ಕಿಸಬಹುದು. ಸಂಪರ್ಕ: 0824-2414412


Spread the love
Subscribe
Notify of

0 Comments