ಅಕ್ರಮ ಸಾಗಾಟದ ಆರೋಪ: ದನಗಳ ಸಹಿತ ಓರ್ವನ ಸೆರೆ

Spread the love

ಅಕ್ರಮ ಸಾಗಾಟದ ಆರೋಪ: ದನಗಳ ಸಹಿತ ಓರ್ವನ ಸೆರೆ

ವಿಟ್ಲ: ದನಗಳ ಅಕ್ರಮ ಸಾಗಾಟ ಆರೋಪದ ಮೇರೆಗೆ ವಾಹನ ಸಹಿತ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಕೊಳ್ನಾಡು ಗ್ರಾಮದ ಬಾರೆಬೆಟ್ಟು ಸಮೀಪದ ಮುಂಡತ್ತಜೆ ಎಂಬಲ್ಲಿ ಗುರುವಾರ ನಡೆದಿದೆ.

ಸಾಲೆತ್ತೂರು ಕಟ್ಟೆ ನಿವಾಸಿ ಉಸ್ಮಾನ್ ಶಾಫಿ ಎಂಬಾತನನ್ನು ಹಾಗೂ ಎರಡು ದನಗಳು, ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋಡದವು ಕರೈ ರಸ್ತೆಯಲ್ಲಿ ದನಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿರುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಎಸ್ಸೈ ಯಲ್ಲಪ್ಪ, ಸಿಬ್ಬಂದಿ ಜಯಕುಮಾರ್, ಪ್ರತಾಪ್ ರೆಡ್ಡಿ ಅವರ ತಂಡ ಕಾರ್ಯಾಚರಣೆ ನಡೆಸಿದೆ‌.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗಾಟದ ವೇಳೆ ವಾಹನಕ್ಕೆ ಬೆಂಗವಲಾಗಿ ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ.


Spread the love