ಅವಧಿ ಮೀರಿದ ಮದ್ಯ ನಾಶ

Spread the love

ಮ0ಗಳೂರು: ಮಾನವ ಸೇವನೆಗೆ ಅಯೋಗ್ಯವಾದ ಅವಧಿ ಮೀರಿದ 31 ಪೆಟ್ಟಿಗೆ 47 ಬಾಟಲಿ ಮದ್ಯವನ್ನು ಗುರುವಾರ ಮಂಗಳೂರಿನ ಮರೋಳಿಯಲ್ಲಿರುವ ಕೆಎಸ್‍ಬಿಸಿಎಲ್ ಮದ್ಯದ ಡಿಪೋದಲ್ಲಿ ನಾಶಪಡಿಸಲಾಯಿತು.

liqour-destroy

ಅಬಕಾರಿ ಅಪ ಆಯುಕ್ತ ಎಲ್.ಎ. ಮಂಜುನಾಥ್ ಅವರ ಆದೇಶದ ಮೇರೆಗೆ ಡಿಪೋ ಮೇಲ್ವಿಚಾರಣಾ ಅಧಿಕಾರಿ ನಾಗೇಶ್ ಕುಮಾರ್, ಅಬಕಾರಿ ಉಪ ಅಧೀಕ್ಷಕರಾದ ಅಮರನಾಥ ಎಸ್. ಎಸ್. ಭಂಡಾರಿ ಹಾಗೂ ಡಿಪೋ ಮ್ಯಾನೇಜರ್ ಭವಾನಿಶಂಕರ್ ಹಾಗೂ ಪಂಚರ ಸಮಕ್ಷಮದಲ್ಲಿ ಮದ್ಯವನ್ನು ನಾಶಪಡಿಸಲಾಯಿತು.


Spread the love