ಆಕಾಶವಾಣಿ ಕಲ್ಯಾಣವಾಣಿ ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್

Spread the love

ಆಕಾಶವಾಣಿ ಕಲ್ಯಾಣವಾಣಿ  ನೇರ ಫೋನ್ ಇನ್ ನಲ್ಲಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ರಾಜ್ಯ ಮೀನುಗಾರಿಕಾ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರು ಮೇ 31 ರಂದು ಬೆಳಿಗ್ಗೆ 9.05 ರಿಂದ 10.00 ಗಂಟೆಯವರೆಗೆ ಮಂಗಳೂರು ಆಕಾಶವಾಣಿಯ ಕಲ್ಯಾಣವಾಣಿ  ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ  ಭಾಗವಹಿಸಲಿರುವರು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ರಚನೆಯಾಗಿ 20 ವರ್ಷಗಳನ್ನು ಪೂರೈಸುತ್ತಿರುವ ಸಂಧರ್ಭದಲ್ಲಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಅಭಿವೃದ್ಧಿ  ಕಾರ್ಯಕ್ರಮಗಳು, ವಿವಿಧ ಕ್ಷೇತ್ರಗಳಲ್ಲಿ  ಸಾಧಿಸಿರುವ ಪ್ರಗತಿ ಮುಂದಿನ ಯೋಜನೆಗಳು ಇವಲ್ಲದೆ ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟ ಇತರ ವಿಚಾರಗಳ ಕುರಿತಾಗಿ ಸಾರ್ವಜನಿಕರೊಂದಿಗೆ ದೂರವಾಣಿಯ ಮೂಲಕ ಸಂವಾದ ನಡೆಸಲಿರುವರು.

ಸಾರ್ವಜನಿಕರು ದೂರವಾಣಿ ಸಂಖ್ಯೆ (0824) 2211999 ಹಾಗೂ ಮೊಬೈಲ್ ಸಂಖ್ಯೆ  8277038000  ಗೆ ಕರೆ ಮಾಡಬಹುದಾಗಿ  ಸಚಿವರ ಕಛೇರಿ ಪ್ರಕಟಣೆ ತಿಳಿಸಿದೆ. 


Spread the love