ಆಸ್ಟೋಮೋಹನ್ ಅವರಿಗೆ ರಾವೂರಿ ಭಾರಧ್ವಾಜ ಸ್ಮಾರಕ ಪ್ರಶಸ್ತಿ ಪ್ರದಾನ

Spread the love

ಆಸ್ಟೋಮೋಹನ್ ಅವರಿಗೆ ರಾವೂರಿ ಭಾರಧ್ವಾಜ ಸ್ಮಾರಕ ಪ್ರಶಸ್ತಿ ಪ್ರದಾನ

ಉಡುಪಿ: ಆಂಧ್ರ ಪ್ರದೇಶ ಪತ್ರಿಕಾ ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆಸ್ಟ್ರೋ ಮೋಹನ್ ನವೆಂಬರ್ 1 ರಂದು ವಿಜಯವಾಡಾದಲ್ಲಿ ಜರಗಿದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾವೂರಿ ಭಾರಧ್ವಾಜ ಸ್ಮಾರಕ ಪ್ರಶಸ್ಥಿ ಸ್ವೀಕರಿಸಿದರು.

astromohan

ಆಂಧ್ರಪ್ರದೇಶ ಶಾಸನ ಸಭೆಯ ಉಪ ಸಭಾಪತಿ ಮಂಡಲ ಬುದ್ಧ ಪ್ರಸಾದ್ , ನಾಗಾರ್ಜುನ ವಿಶ್ವ ವಿದ್ಯಾಲಯದ್ ಕುಲಪತಿ ಆಚಾರ್ಯ ರಾಜೇಂದ್ರಪ್ರಸಾದ್ ,ಶಾಸಕ ಗಡ್ಡಿ ರಾಮ ಮೋಹನ. ವಿಜಯವಾಡ ಕಲ್ಚರಲ್ ಸೆಂಟರ್ ಅಧ್ಯಕ್ಷ ಹರಿಪ್ರಸಾದ್,ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಅಧ್ಯಕ್ಷ ಟಿ. ಶ್ರೀನಿವಾಸ ರೆಡ್ಡಿ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Spread the love