ಇಸ್ಪೀಟು ಅಡ್ಡೆಗೆ ಕುಂದಾಪುರ ಪೊಲೀಸರಿಂದ ದಾಳಿ: 14 ಮಂದಿ ವಶ

Spread the love

ಇಸ್ಪೀಟು ಅಡ್ಡೆಗೆ ಕುಂದಾಪುರ ಪೊಲೀಸರಿಂದ ದಾಳಿ: 14 ಮಂದಿ ವಶ

ಕುಂದಾಪುರ: ನಗರದ‌ ಶಾಸ್ತ್ರೀಪಾರ್ಕ್ ಬಳಿಯ ಲಾಡ್ಜ್‌ ವೊಂದರ ರೂಮ್ ನಲ್ಲಿ ಇಸ್ಪೀಟ್‌ ಜುಗಾರಿ ಆಟ ನಡೆಯುತ್ತಿದೆ ಎನ್ನುವ ಮಾಹಿತಿ ಮೇರೆಗೆ ಶನಿವಾರ ರಾತ್ರಿ ದಾಳಿ ನಡೆಸಿದ ಕುಂದಾಪುರ ನಗರ ಠಾಣಾಧಿಕಾರಿ ಪಿಎಸ್ಐ ಹರೀಶ್ ಆರ್. ನೇತೃತ್ವದ ಕುಂದಾಪುರ ಪೊಲೀಸರ ತಂಡ ಜುಗಾರಿ ನಿರತ 14 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸತೀಶ, ಗಣೇಶ, ರಮೇಶ ಮೊಗವೀರ, ರಾಘವೇಂದ್ರ ಶೇರಿಗಾರ್, ಚೇತನ್ ಮೊಗವೀರ, ಸಂದೀಪ, ರಾಘವೇಂದ್ರ, ವಾಸುದೇವ, ಮಾಧವ ಮರಕಾಲ, ವಿಜಯ ಕುಮಾರ್, ಶ್ರೀಕಾಂತ, ತೇಜ ಬಿಲ್ಲವ, ಶಿವ ಮೊಗವೀರ, ಶೇಖರ ಶೆಟ್ಟಿ ಸೆರೆ ಸಿಕ್ಕ ಆರೋಪಿಗಳು.

ಜುಗಾರಿಗೆ ಬಳಸಿದ್ದ ಒಟ್ಟು ನಗದು 47,370 ರೂ. ಹಾಗೂ ಇತರೆ ಆಟದ ಪರಿಕರಗಳು, ಟೇಬಲ್‌‌ ಮೇಲಿದ್ದ 1 ಪೈಬರ್ ಟೇಬಲ್‌, 6 ಪೈಬರ್ ಖುರ್ಚಿಯನ್ನು ಮತ್ತು 11 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕುಂದಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love