ಉಡುಪಿ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಸಿಟಿ ರೌಂಡ್ಸ್ – ಮಾಲ್, ತರಕಾರಿ ಶಾಪ್ ಗಳಿಗೆ ಧಿಡೀರ್ ಭೇಟಿ

Spread the love

ಉಡುಪಿ ಜಿಲ್ಲಾಧಿಕಾರಿ ಮತ್ತು ಎಸ್ ಪಿ ಸಿಟಿ ರೌಂಡ್ಸ್ – ಮಾಲ್, ತರಕಾರಿ ಶಾಪ್ ಗಳಿಗೆ ಧಿಡೀರ್ ಭೇಟಿ

ಉಡುಪಿ: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾ.31ರವರೆಗೆ ರಾಜ್ಯಾದ್ಯಂತ ಲಾಕ್ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ನಗರದಲ್ಲಿನ ಮಾಲ್ ಗಳು ಮತ್ತು ತರಕಾರಿ ಶಾಪ್ ಗಳಿಗೆ ಧೀಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಪ್ರಮುಖ ಮಾಲ್ ಗಳಾದ ರಿಲಾಯನ್ಸ್, ಕೆನರಾ ಮಾಲ್, ಬಿಗ್ ಬಝಾರ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ ಜಗದೀಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಪರಿಶಿಲನೆ ನಡೆಸಿದರು. ಈ ವೇಳೆ ತರಕಾರಿಗೆ ಲೆಕ್ಕಕ್ಕಿಂತ ಹೆಚ್ಚು ಬೆಲೆ ವಿಧಿಸಿದ್ದಕ್ಕೆ ಬಿಗ್ ಬಜಾರ್ ಮೆನೇಜರ್ ನನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.


Spread the love