ಉಪ್ಪಿನಂಗಡಿ ಆರ್.ಕೆ ಜ್ಯುವೆಲರ್ಸ್ ಕಳ್ಳತನ – ಮೂವರ ಬಂಧನ

Spread the love

ಉಪ್ಪಿನಂಗಡಿ ಆರ್.ಕೆ ಜ್ಯುವೆಲರ್ಸ್ ಕಳ್ಳತನ – ಮೂವರ ಬಂಧನ

ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಕೆ ಜ್ಯುವೆಲರ್ಸ್ ಅಂಗಡಿಯಲ್ಲಿ ನಡೆದ ಚಿನ್ನ ಬೆಳ್ಳೀ ಆಭರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಗುಜರಾತ್ ದಾಹೋಡ್ ನಿವಾಸಿ್ ಭಗವಾನ್ ಸಿಂಗ್ @ ಭಗವಾನ್ ಸಿಂಗ್ ರಮೇಶ್ ಭಾಯ್ ಸಿಸೋಡಿಯಾ (32), ಸುನೀಲ್ @ ಸಂದೀಪ್ (27) ಮತ್ತು ರಾಜಸ್ಥಾನ ನಿವಾಸಿ ಜಮೀಲ್ @ ಚಾಚಾ (60) ಎಂದು ಗುರುತಿಸಲಾಗಿದೆ.

ಅಗೋಸ್ತ್ 15 ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್.ಕೆ ಜ್ಯುವೆಲ್ಲರ್ ಎಂಬ ಆಭರಣ ಅಂಗಡಿಯಲ್ಲಿ ನಡೆದ 27,00,000 ರೂ ಗಳ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳ ಕಳವು ಆಗಿದ್ದು ಆರೋಪಿಗಳಿಂದ ರೂ 9,31,649.00 ಗಳ 185.590 ಗ್ರಾಂ ತೂಕದ ಚಿನ್ನಾಭರಣ ಹಾಗೂ 3972.060 ಗ್ರಾಂ ಬೆಳ್ಳಿಯ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಈಚರ್ ಲಾರಿ ಯನ್ನು ( ಅಂದಾಜುಮೌಲ್ಯ 23,00,000 ರೂ) ವಶಪಡಿಸಿಕೊಳ್ಳಲಾಗಿದೆ. ವಶಪಡಿಸಲಾದ ಆಭರಣ ಹಾಗೂ ವಾಹನದ ಒಟ್ಟು ಮೌಲ್ಯ 32,31,649.00 ರೂ ಆಗಬಹುದು.

ಕಳ್ಳತನ ಮಾಡಿದ ತಂಡವು ಹೊರ ರಾಜ್ಯಗಳಲ್ಲಿ ಕಳ್ಳತನ ಮಾಡುವ ರಾಜಸ್ಥಾನ ಹಾಗೂ ಗುಜರಾತ್ ರಾಜ್ಯದ ಕುಖ್ಯಾತ ಕಳ್ಳರನ್ನು ಒಳಗೊಂಡ ತಂಡವಾಗಿರುತ್ತದೆ.


Spread the love