ಕಂಕನಾಡಿ ಪೊಲೀಸರಿಂದ ಇಬ್ಬರು ಬ್ಯಾಟರಿ ಕಳ್ಳರ ಬಂಧನ

Spread the love

ಕಂಕನಾಡಿ ಪೊಲೀಸರಿಂದ ಇಬ್ಬರು ಬ್ಯಾಟರಿ ಕಳ್ಳರ ಬಂಧನ

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕುಲಶೇಖರ ಸೆಕ್ರೆಡ್ ಹಾರ್ಟ್ ಶಾಲೆಯ ಮುಂಭಾಗದ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಪಿಕ್ ಅಪ್ ವಾಹನದ ಬ್ಯಾಟರಿಯನ್ನು ಮಾರ್ಚ್ 12 ರಂದು ರಾತ್ರಿ ವೇಳೆಯಲ್ಲಿ ಕಳವು ಮಾಡಿ, ಪಿಕ್ ಅಪ್ ವಾಹನದ ಇಂಜಿನ್ ಗೆ ಉಪ್ಪನ್ನು ಹಾಕಿ ಸುಮಾರು 12,000/- ನಷ್ಟ ಉಂಟು ಮಾಡಿದ ಕುರಿತಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಆರೋಪಿಗಳಿಂದ ಕಳವಾದ ಬ್ಯಾಟರಿ ಮೌಲ್ಯ ರೂ. 7,500/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಕೊಳ್ಳಲಾಗಿರುತ್ತದೆ.

ಬಂಧಿತರನ್ನು ಬೆಳಗಾಂ ಜಿಲ್ಲೆ ಸವದತ್ತಿ ನಿವಾಸಿ ರಾಜೇಶ್ (31) ಮತ್ತು ಪ್ರಕಾಶ್ (38) ಎಂದು ಗುರುತಿಸಲಾಗಿದೆ.

ಈ ಪತ್ತೆ ಕಾರ್ಯಾಚರಣೆಯನ್ನು ಕಂಕನಾಡಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಗದೀಶ್ ಆರ್., ಕಾನೂನು ಸುವ್ಯವಸ್ಥೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ್ ಟಿ. ಆರ್. ಹಾಗೂ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ.


Spread the love