ಕಡೂರು: ದಂತ ವೈದ್ಯರ ಪತ್ನಿಯನ್ನು ಕತ್ತು ಸೀಳಿ ಕೊಲೆ

Spread the love

ಕಡೂರು: ದಂತ ವೈದ್ಯರ ಪತ್ನಿಯನ್ನು ಕತ್ತು ಸೀಳಿ ಕೊಲೆ

ಕಡೂರು: ಪಟ್ಟಣದ ಲಕ್ಷ್ಮೀಶ ನಗರದ ಮನೆಯೊಂದರಲ್ಲಿ ದಂತ ವೈದ್ಯರ ಪತ್ನಿಯನ್ನು ಕತ್ತು ಸೀಳಿ ಕೊಲೆ ಮಾಡಲಾಗಿದೆ.

ಬೀರೂರಿನಲ್ಲಿ ತಿರುಮಲ ಸ್ಮೈಲ್ಸ್ ಡೆಂಟಲ್ ಕ್ಲಿನಿಕ್ ನಡೆಸುತ್ತಿರುವ ಡಾ.ರೇವಂತ್ ಅವರ ಪತ್ನಿ ಕವಿತಾ (35) ಕೊಲೆಯಾದವರು. ಮೃತರಿಗೆ ಐದು ವರ್ಷದ ಮತ್ತು ಏಳು ತಿಂಗಳ ಇಬ್ಬರು ಗಂಡು ಮಕ್ಕಳಿದ್ದಾರೆ.

ಗಾಯಗೊಂಡಿದ್ದ ಕವಿತಾ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಯಿ ತಾದರೂ ಆಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು. ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳಹಿಸಲಾಗಿದೆ.


Spread the love