ಕದ್ರಿಯಿಂದ ಸುಬ್ರಹ್ಮಣ್ಯದತ್ತ ಪಯಣ ಬೆಳೆಸಿದ ಬ್ರಹ್ಮರಥ ಹೊತ್ತ ಟ್ರಕ್

Spread the love

ಬ್ರಹ್ಮರಥಕ್ಕೆ  ಕದ್ರಿಯಿಂದ ಚಾಲನೆ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಅರ್ಪಣೆ ಮಾಡಲಿರುವ ಬ್ರಹ್ಮರಥಕ್ಕೆ ಮಂಗಳವಾರ ಕದ್ರಿಯಿಂದ ಚಾಲನೆ ನೀಡಲಾಯಿತು.

ಸೋಮವಾರ ಕೋಟೇಶ್ವರದಿಂದ ಹೊರಟಿದ್ದ ಬ್ರಹ್ಮರಥ ಹೊತ್ತ ಬೃಹತ್ ಟ್ರಕ್ ರಾತ್ರಿ ಮಂಗಳೂರು ತಲುಪಿ ಕದ್ರಿಯಲ್ಲಿ ತಂಗಿತ್ತು.

ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಕದ್ರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎ.ಜೆ.ಶೆಟ್ಟಿ, ಮಾಜಿ ಮೇಯರ್ ಭಾಸ್ಕರ ಮೊಯ್ಲಿ, ಸುದೀರ್ ಶೆಟ್ಟಿ ಕಣ್ಣೂರು, ರಾಕೇಶ್ ಮಲ್ಲಿ, ಅಶೋಕ್ ಕುಮಾರ್ .ಡಿ.ಕೆ, ವಿಶ್ವಾಸ್ ಕುಮಾರ್ ದಾಸ್, ಪುಷ್ಪರಾಜ ಜೈನ್, ಕಳ್ಳಿಗೆ ತಾರಾನಾಥ ಶೆಟ್ಟಿ, ಸಂಜೀವ ಮಡಿವಾಳ್, ರಾಜಗೋಪಾಲ್ ರೈ, ಟಿ.ಕೆ.ಸುಧೀರ್ , ಸುಬ್ರಹ್ಮಣ್ಯ ದೇವಸ್ಥಾನ ದ ಆಡಳಿತ ಮಂಡಳಿ ಅದ್ಯಕ್ಷ ನಿತ್ಯಾನಂದ ಮುಂಡೋಡಿ, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.


Spread the love