ಕೊಡವೂರು ಮಹತೋಬಾರ ಶ್ರೀ ಶಂಕರನರಾಯಣ ದೇವಳದಲ್ಲಿ ಧ್ವಜಾರೋಹಣ

Spread the love

ಕೊಡವೂರು ಮಹತೋಬಾರ ಶ್ರೀ ಶಂಕರನರಾಯಣ ದೇವಳದಲ್ಲಿ ಧ್ವಜಾರೋಹಣ

ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಫೆ.11ರಂದು ನಡೆಯಲಿರುವ ಶ್ರೀ ಮನ್ಮಹಾರಥೋತ್ಸವದ ಅಂಗವಾಗಿ ಭಾನುವಾರದಂದು ಧ್ವಜಾರೋಹಣದ ವಿಧಿ ವಿಧಾನಗಳು ದೇವಳದ ಪ್ರಧಾನ ತಂತ್ರಿ ಪುತ್ತೂರು ಹಯವದನ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯ ಜನಾರ್ದನ್ ಕೊಡವೂರು, ಅಡಿಗ ಕೃಷ್ಣಮೂರ್ತಿ, ಎ.ರಾಜ ಸೇರಿಗಾರ್, ಬೇಬಿ ಮೆಂಡನ್, ಅಗ್ರಹಾರ ಲಕ್ಷ್ಮೀ ನಾರಾಯಣ ಭಟ್, ಶಾಮ ಭಟ್ ಮೂಡಬೆಟ್ಟು, ಕೆ. ಗೋವಿಂದ ಐತಾಳ್, ಟಿ.ರಾಘವೇಂದ್ರ ರಾವ್, ವಿಜಯ ಎಂ. ಬಂಗೇರ, ಕೆ. ಕಾಳು ಸೇರಿಗಾರ್, ಹರೀಶ್ ಕೋಟ್ಯಾನ್, ಉಮೇಶ್ ರಾವ್, ಅನಂತ ಪದ್ಮನಾಭ ಭಟ್ ಹಾಗು ಭಕ್ತಾದಿಗಳು ಉಪಸ್ಥಿತರಿದ್ದರು.


Spread the love