ಕೊರೋನಾ ಸೋಂಕಿತರ ದೇಹದ ಅಂಶಗಳ ಮಾದರಿ ಪರೀಕ್ಷಿಸಲು ಕರಾವಳಿಯಲ್ಲಿ ಲ್ಯಾಬ್ ಸ್ಥಾಪಸಲು ಪ್ರಮೋದ್ ಮಧ್ವರಾಜ್ ಆಗ್ರಹ

Spread the love

ಕೊರೋನಾ ಸೋಂಕಿತರ ದೇಹದ ಅಂಶಗಳ ಮಾದರಿ ಪರೀಕ್ಷಿಸಲು ಕರಾವಳಿಯಲ್ಲಿ ಲ್ಯಾಬ್ ಸ್ಥಾಪಸಲು ಪ್ರಮೋದ್ ಮಧ್ವರಾಜ್ ಆಗ್ರಹ

ಉಡುಪಿ: ಕೊರೋನಾ ಸೋಂಕಿತರ ರಕ್ತದ ಮಾದರಿ ಹಾಗೂ ದೇಹದ ಅಂಶಗಳ ಪರೀಕ್ಷೆ ನಡೆಸಲು ಉಡುಪಿ ಅಥವಾ ಮಂಗಳೂರಿನಲ್ಲಿ ಪ್ರತ್ಯೇಕ ಲ್ಯಾಬ್ ತೆರೆಯುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಮೋದ್ ಮಧ್ವರಾಜ್ ಅವರು “ ಈಗಷ್ಟೆ ಜಿಲ್ಲಾ ಸರ್ಜನ್ ಅವರಲ್ಲಿ ಮಾತನಾಡಿದಾಗ ಉಡುಪಿ ಮಂಗಳೂರಿನಲ್ಲಿ ಕೊರೊನಾ ವೈರಸ್ ಪರೀಕ್ಷೆಯ ಲ್ಯಾಬ್ ಉಡುಪಿ ಮತ್ತು ಮಂಗಳೂರಿನಲ್ಲಿ ಇಲ್ಲ ಆದ್ದರಿಂದ ಶಂಕಿತ ಕೊರೋನಾ ರೋಗಿಗಳ ದೇಹದ ಅಂಶಗಳನ್ನು ಹತ್ತಿರದ ಶಿವಮೊಗ್ಗಕ್ಕೆ ಕೊಂಡೊಯ್ಯಲಾಗುತ್ತದೆ ಎನ್ನುವುದು ತಿಳಿಯಿತು. ಸರಕಾರ ಕೂಡಲೇ ಕರಾವಳಿಯಲ್ಲಿ ಕೊರೋನಾ ಮಾದರಿಯ ಪರೀಕ್ಷೆ ಮಾಡಲು ಲ್ಯಾಬ್ ತೆರೆಯುವಂತೆ ಆಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.


Spread the love