ಕೋವಿಡ್ -19 ವಿಚಾರದಲ್ಲಿ ಹೇಳಿಕೆ ನೀಡುವಾಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಾಲೋಚಿಸಿ ಬಳಿಕ ನೀಡಿ – ಹರೀಶ್ ಕುಮಾರ್

Spread the love

ಕೋವಿಡ್ -19 ವಿಚಾರದಲ್ಲಿ ಹೇಳಿಕೆ ನೀಡುವಾಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಾಲೋಚಿಸಿ ಬಳಿಕ ನೀಡಿ – ಹರೀಶ್ ಕುಮಾರ್

ಮಂಗಳೂರು: ಕೋವಿಡ್ -19 ವಿಚಾರದಲ್ಲಿ ಪಕ್ಷದ ನಾಯಕರು ಯಾವುದೇ ರೀತಯ ಪ್ರಕಟಣೆ ನೀಡುವ ಮೊದಲು ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಾಲೋಚಿಸಿ ನೀಡುವಂತೆ ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ -19(ಕೊರೋನ) ಪ್ರಪಂಚದಾದ್ಯಂತ ಇದ್ದು ಈ ರೋಗದ ಬಗ್ಗೆ ಪತ್ರಿಕಾ ಹೇಳಿಕೆ ಮತ್ತು ಪ್ರಕಟಣೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಗಳನ್ನು ನೀಡುವುದು ಬಹಳ ಸೂಕ್ಷ್ಮ ವಿಚಾರವಾಗಿರುತ್ತದೆ. ಕೊವೀಡ್-19 (ಕೊರೋನ) ಬಗ್ಗೆ ಪಕ್ಷದ ನಾಯಕರು ಪತ್ರಿಕಾ ಹೇಳಿಕೆ, ಪತ್ರಿಕಾ ಪ್ರಕಟಣೆ ಮತ್ತು ಜಾಲತಾಣಗಳ ಮೂಲಕ ವಿವಿಧ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ , ಕೋವಿಡ್ -19 (ಕೊರೋನ) ರೋಗವು ಬಹಳ ಸೂಕ್ಷ್ಮ ವಿಚಾರವಾಗಿದ್ದು ಈ ಬಗ್ಗೆ ಪಕ್ಷದ ನಾಯಕರುಗಳು ಪತ್ರಿಕಾ ಹೇಳಿಕೆ, ಪತ್ರಿಕಾ ಪ್ರಕಟಣೆ ಮತ್ತು ಜಾಲತಾಣಗಳ ಹೇಳಿಕೆಯನ್ನು ನೀಡುವಾಗ ಜಿಲ್ಲಾ ಕಾಂಗ್ರೆಸ್ನಲ್ಲಿ ಸಮಾಲೋಚನೆ ನಡೆಸದೇ ನೀಡಬಾರದು. ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಜಿಲ್ಲಾ ಕಾಂಗ್ರೆಸ್ನಲ್ಲಿ ಸಮಾಲೋಚಿಸಿ ನೀಡುವಂತೆ ಈ ಮೂಲಕ ಜಿಲ್ಲಾಧ್ಯಕ್ಷರಾದ ಕೆ.ಹರೀಶ್ ಕುಮಾರ್ರವರು ಸೂಚಿಸಿದ್ದಾರೆ ಮತ್ತು ಜಿಲ್ಲಾಡಳಿತ ತೆಗೆದುಕೊಂಡ ಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯು ಬೆಂಬಲ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾ ಕಾಂಗ್ರೆಸ್ನ ಉಪಾಧ್ಯಕ್ಷರಾದ ಸದಾಶಿವ ಉಳ್ಳಾಲ್ರವರು ತಿಳಿಸಿರುತ್ತಾರೆ.


Spread the love