ಕ್ಲಾಕ್ ಟವರ್ ವೃತ್ತ ಕಾಮಗಾರಿ;  ರಸ್ತೆ ಸಂಚಾರದಲ್ಲಿ ಬದಲಾವಣೆ

Spread the love

ಕ್ಲಾಕ್ ಟವರ್ ವೃತ್ತ ಕಾಮಗಾರಿ;  ರಸ್ತೆ ಸಂಚಾರದಲ್ಲಿ ಬದಲಾವಣೆ

ಮಂಗಳೂರು: ಮಂಗಳೂರು ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣಗೊಳ್ಳಲಿರುವ ಪಾದಾಚಾರಿಗಳ ಭೂಗತ ಮಾರ್ಗದ ಕಾಮಗಾರಿಯನ್ನು ನಗರದ ಕ್ಲಾಕ್ ಟವರ್ ವೃತ್ತದ ಬಳಿ ನ.28ರಿಂದ ಪಾರಂಭಿಸಲಾಗುತ್ತಿದ್ದು, ಆದುದರಿಂದ ನಗರದ ಎ.ಬಿ.ಶೆಟ್ಟಿ ಸರ್ಕಲ್‍ನಿಂದ ಗಡಿಯಾರ ಗೋಪುರದ ಕಡೆಗೆ ಹಾದು ಹೋಗುವ ರಸ್ತೆಯನ್ನು ಮುಚ್ಚಲಾಗುವುದು. ಸಾರ್ವಜನಿಕರು ಎ.ಬಿ.ಶೆಟ್ಟಿ ಸರ್ಕಲ್‍ನಿಂದ ಎಡಕ್ಕೆ ತಿರುಗಿ ಹಾಮಿಲ್ಟನ್ ವೃತ್ತ ಮತ್ತು ರಾವ್ & ರಾವ್ ವೃತ್ತವಾಗಿ ಗಡಿಯಾರ ಗೋಪುರದ ಕಡೆಗೆ ಪ್ರಯಾಣಿಸಲು ರಸ್ತೆ ಸಂಚಾರದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಸಾರ್ವಜನಿಕರು ಕಾಮಗಾರಿ ಮುಗಿಯುವವರೆಗೆ ಸಹಕರಿಸಬೇಕಾಗಿ ಮಂಗಳೂರು ಸ್ಮಾರ್ಟ್‍ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆ ತಿಳಿಸಿದೆ.


Spread the love