ಗಂಗೊಳ್ಳಿ: ಜಾನುವಾರು ಕಳ್ಳತನ ಪ್ರಕರಣ – ಮೂವರ ಬಂಧನ

Spread the love

ಗಂಗೊಳ್ಳಿ: ಜಾನುವಾರು ಕಳ್ಳತನ ಪ್ರಕರಣ – ಮೂವರ ಬಂಧನ

ಕುಂದಾಪುರ: ಗಂಗೊಳ್ಳಿ ಗ್ರಾಮದ ಹಳೆಯ ಬೋಟ್ ಹೌಸ್ ಎಂಬಲ್ಲಿ ಸೆ.19ರಂದು ಪಂಚಗಂಗಾವಳಿ ನದಿಯ ದಡದ ತೀರದಲ್ಲಿ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಂಡ್ಲೂರು ನಿವಾಸಿಗಳಾದ ನಹೀಮ್ (23), ಕರಾಣಿ ಮಂಝೂರ್ (30) ಮತ್ತು ಫಹಾದ್ ಎಂದು ಗುರುತಿಸಲಾಗಿದೆ.

ಗಂಗೊಳ್ಳಿ ಗ್ರಾಮದ ಹಳೆಯ ಬೋಟ್ ಹೌಸ್ ಎಂಬಲ್ಲಿ ಸೆ.19ರಂದು ಪಂಚಗಂಗಾವಳಿ ನದಿಯ ದಡದ ತೀರದಲ್ಲಿ ಚರ್ಮ ಮತ್ತು ತಲೆಯ ಭಾಗಗಳ ಕಳೆ ಬರಹ ಕಂಡು ಬಂದ ಪ್ರಕರಣಕ್ಕೆ ಸಂಬಂದಿಸಿದಂತೆ ಹಾಗೂ ಬೈಂದೂರು ತಾಲೂಕಿನ ನಾಡಗುಡ್ಡೆಯಂಗಡಿಯಲ್ಲಿ ಆ.13ರಂದು ಬೆಳಿಗ್ಗೆ 03:20ರ ಸುಮಾರಿಗೆ ಜಾನುವಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಠಾಣಾ ಪಿಎಸ್ಐ ಹರೀಶ್ ಆರ್ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಪೊಲೀಸ್ ತನಿಖೆ ಮುಂದುವರೆದಿದೆ.


Spread the love