ಗುಜರಾತ್ ನಿಂದ ಆಗಮಿಸಿದ ವ್ಯಕ್ತಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ, ಐವರ ವಿರುದ್ದ ಪ್ರಕರಣ ದಾಖಲು

Spread the love

ಗುಜರಾತ್ ನಿಂದ ಆಗಮಿಸಿದ ವ್ಯಕ್ತಿಗಳಿಂದ ಕ್ವಾರಂಟೈನ್ ನಿಯಮ ಉಲ್ಲಂಘನೆ, ಐವರ ವಿರುದ್ದ ಪ್ರಕರಣ ದಾಖಲು

ಕುಂದಾಪುರ: ಕೊರೊನಾ ಸೋಂಕು ಸಂದರ್ಭದಲ್ಲಿ ಗುಜರಾತ್ ನಿಂದ ಬಂದು ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಐವರ ವಿರುದ್ದ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 8ರಂದು ಗುಜರಾತಿನ ಸೂರತ್ ನಿಂದ ಕೆಂಚನೂರು ನಿವಾಸಿಗಳಾದ ನಾಗರಾಜ್ (34), ಗೋವಿಂದ (34), ರಾಘವೇಂದ್ರ (30), ಲಕ್ಷ್ಮಣ್(48) ಮತ್ತು ಸುಧಾಕರ್ (32) ಊರಿಗೆ ಆಗಮಿಸಿದ್ದು, ಸರಕಾರದ ಕ್ವಾರಂಟೈನ್ ನಿಯಮ ಪಾಲಿಸದೆ ಕೋವಿಡ್ 19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ಸಂಬಂಧ ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ ಕೆಂಚನೂರಿನಲ್ಲಿ ಸಕಾರವಿಲ್ಲದೆ ಅಡ್ಡಾಡುತ್ತಿರುವುದರ ವಿರುದ್ದ ಈ ಐದು ಮಂದಿಯ ವಿರುದ್ದ ಕೊರೊನಾ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love