ಜುಲೈ 4 ರಂದು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ – ಕರ್ನಾಟಕ ಶಾಖೆಯ ಚಾರ್ಟಡ್ ವಿಮಾನ ಮಂಗಳೂರಿಗೆ

Spread the love

ಜುಲೈ 4 ರಂದು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ – ಕರ್ನಾಟಕ ಶಾಖೆಯ ಚಾರ್ಟಡ್ ವಿಮಾನ ಮಂಗಳೂರಿಗೆ

ಮಂಗಳೂರು: ಕೆ.ಕೆ.ಎಮ್.ಎ ಎಂದೇ ಜನಪ್ರಿಯವಾಗಿರುವ ಕುವೈಟ್ ನ ಪ್ರಸಿದ್ದ ಸಾಮುದಾಯಿಕ ಮತ್ತು ಸಾಮಾಜಿಕ ಸಂಘಟನೆಯಾಗಿರುವ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ಇದರ ಕರ್ನಾಟಕಾ ಶಾಖಾ ವತಿಯಿಂದ ಕರ್ನಾಟಕಕ್ಕೆ ಮೊದಲನೇ ಖಾಸಗಿ ಚಾರ್ಟಡ್ ವಿಮಾನವೂ ಮಂಗಳೂರಿಗೆ ದಿನಾಂಕ 4 ಜುಲೈ 2020 ರಂದು ಕುವೈಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದೆ.

ಭಾರತೀಯ ಮೂಲದ ಇಂಡಿಗೋ ಸಂಸ್ಥೆಯ ವಿಮಾನವು 165 ಅನಿವಾಸಿ ಕನ್ನಡಿಗರನ್ನು ಮರಳಿ ತಾಯಿ ನಾಡಿಗೆ ಹೊತ್ತು ತರಲಿದೆ. ಈ ವಿಮಾನದಲ್ಲಿ ಆದ್ಯತೆಯ ಮೇರೆಗೆ ಗರ್ಭಿಣಿಯರಿಗೆ, ತುರ್ತು ಚಿಕಿತ್ಸಾ ರೋಗಿಗಳಿಗೆ, ಹಿರಿಯ ನಾಗರಿಕರಿಗೆ, ವಿಸಿಟ್ ವೀಸಾದಲ್ಲಿ ಬಂದು ಸಿಲುಕಿಕೊಂಡವರಿಗೆ ಹಾಗೂ ತಾಯಿನಾಡಿನಲ್ಲಿ ಮರಣಹೊಂದಿದ ವ್ಯಕ್ತಿಯ ಸಂಬಂಧಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿಯೊಬ್ಬ ಪ್ರಯಾಣಿಕರಿಗೂ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಶನ್ ವತಿಯಿಂದ ಆಹಾರ ಮತ್ತು ಸುರಕ್ಷಿತಾ ಪೊಟ್ಟಣವನ್ನು ನೀಡಲಾಗುತ್ತದೆ.

ಅನಿವಾಸಿ ಕನ್ನಡಿಗರಿಗೆ ಖಾಸಗಿ ಚಾರ್ಟಡ್ ವಿಮಾನ ಸೌಲಭ್ಯವನ್ನು ಒದಗಿಸುವಲ್ಲಿ ಎಲ್ಲಾ ಭಾರತೀಯ ಪ್ರಾಧಿಕಾರ ಸಂಸ್ಥೆಗಳು ಉತ್ತಮ ಸಹಕಾರ ನೀಡಿದ್ದೂ, ಜೂನ್ 27 ರಂದು ತೆರಳಬೇಕಾಗಿದ್ದ ವಿಮಾನಯಾನವನ್ನು ತಾಂತ್ರಿಕ ಕಾರಣದಿಂದಾಗಿ 4 ಜುಲೈಗೆ ಮುಂದೂಡಲಾಗಿದ್ದು ಇದಕ್ಕೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕ್ಯಾಪ್ಟನ್ ಗಣೇಶ್ ಪುರಾಣಿಕ್ ರವರು ಸಹಾಯಿಸಿದ್ದಾರೆ ಅವರಿಗೆ ಕ್ರತಜ್ಞತೆ ಯನ್ನು ಸಲ್ಲಿಸುತ್ತೇವೆ, ಮತ್ತು ಕುವೈಟ್ ನಲ್ಲಿ ಮೋಹನ್ ದಾಸ್ ಕಾಮತ್ ಮತ್ತು ಸತೀಶ್ ಚಂದ್ರ ಶೆಟ್ಟಿಯಂತಹಾ ಸಾಮಾಜಿಕ ಸೇವಾಕಾರ್ಯಕರ್ತರು ಹಾಗೂ ಭಾರತದಲ್ಲಿ ಜಿ.ಎ. ಬಾವ ಮತ್ತು ಆರತಿ ಕ್ರಷ್ಣರವರು ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಕೆ.ಕೆ.ಎಂ.ಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಕೆ.ಕೆ.ಎಂ ಕರ್ನಾಟಕ ಶಾಖೆಯ ತಂಡದ ಸದಸ್ಯರ ಅವಿರತ ಶ್ರಮದಿಂದ ಯಾವುದೇ ತೊಂದರೆ ಇಲ್ಲದೇ ಚಾರ್ಟಡ್ ವಿಮಾನದ ಬುಕ್ಕಿಂಗ್ ಹಣ ಸಂಗ್ರಹ ಮತ್ತು ಅವರ ಧಾಖಲೆಗಳ ಸಂಗ್ರಹಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಕೆ.ಕೆ.ಎಮ್. ಎ ಕರ್ನಾಟಕ ಅಧ್ಯಕ್ಷರಾದ S.M. ಮೊಹಮ್ಮದ ಅಝರ್ ರವರು ತಿಳಿಸಿದ್ದಾರೆ

ಪ್ರಯಾಣಿಕರಿಗೆ ಯಾವುದೇ ತೊಂದರೆ ಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆ.ಕೆ.ಎಂ.ಎ. ಹೆಲ್ಪ್ ಡೆಸ್ಕ್ ತಂಡವೂ ನಿರಂತರ ಕಾರ್ಯ ನಿರ್ವಹಿಸಿದ್ದು, ಕುವೈಟ್ ನಲ್ಲಿ ಟಿಕೆಟ್ ಗೆ ನಗದು ಹಣ ಪಾವತಿಸುವ ಪ್ರಯಾಣಿಕರ ವಾಸಸ್ಥಳ ಕ್ಕೆ ಹೋಗಿ ಟಿಕೆಟ್ ಹಣವನ್ನು ಸಂಗ್ರಹಿಸಿದ್ದಾರೆ.

ಕುವೈಟ್ ನಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿ ಯಲ್ಲಿ ತೊಡಗಿಸಿಕೊಂಡಿರುವ ಕೆ.ಕೆ.ಎಮ್. ಎ ಸಂಘಟಣೆಯೂ , ಕೋವಿಡ್ ಸಮಯದಲ್ಲಿ ಮರಣಹೊಂದಿದವರ ಮ್ರತದೇಹವನ್ನು ಊರಿಗೆ ತಲುಪಿಸುವ, ಆಹಾರ ವ್ಯವಸ್ಥೆ ಇಲ್ಲದವರಿಗೆ ಆಹಾರ ಕಿಟ್ ಗಳನ್ನು ಒದಗಿಸುವುದು ಮತ್ತು ಸಂಕಷ್ಟ ಕ್ಕೆ ಒಳಗಾದ ಅನಿವಾಸಿ ಕನ್ನಡಿಗರನ್ನು ತಾಯಿನಾಡಿಗೆತಲುಪಿಸಿವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.


Spread the love