ಡಾ. ಬಿ. ಶಾಂತಾರಾಮ್ ಬಾಳಿಗಾ ಅವರಿಗೆ `ಜೀವಮಾನ ಸಾಧನೆ ಪ್ರಶಸ್ತಿ’

Spread the love

ಡಾ. ಬಿ. ಶಾಂತಾರಾಮ್ ಬಾಳಿಗಾ ಅವರಿಗೆ `ಜೀವಮಾನ ಸಾಧನೆ ಪ್ರಶಸ್ತಿ’

ಮಂಗಳೂರು: ನಗರದ ಪ್ರಖ್ಯಾತ ಶಿಶುವೈದ್ಯ ಮತ್ತು ನವಜಾತಶಾಸ್ತ್ರಜ್ಞ ಡಾ.ಬಿ.ಶಾಂತಾರಾಮ್ ಬಾಳಿಗಾ ಅವರಿಗೆ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಯೋನಾಟಾಲಜಿ ಅಧ್ಯಾಯವು `ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಿದೆ. ಬೆಂಗಳೂರಿನ ಚಾನ್ಸೇರಿ ಪೆವಿಲಿಯನ್ ಹೋಟೆಲ್‍ನಲ್ಲಿ ನಡೆದ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಿಯೋನಾಟಾಲಜಿ ಅಧ್ಯಾಯದ 12 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಸೆಪ್ಟೆಂಬರ್ 28, 2019 ರಂದು ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಕಾರ್ತಿಕ್ ನಾಗೇಶ್ ಎನ್. ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಪ್ರವೀಣ್ ವೆಂಕಟಗಿರಿ ಅವರು ಪ್ರಶಸ್ತಿ ಹಸ್ತಾಂತರ ಸಮಾರಂಭವನ್ನು ನಿರ್ವಹಿಸಿದರು. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನವಜಾತ ತೀವ್ರ ನಿಗಾ ಘಟಕಗಳನ್ನು (ಎನ್‍ಐಸಿಯು) ಸುಧಾರಿಸುವಲ್ಲಿ ಡಾ.ಬಾಳಿಗಾ ಅವರ ಅಸಾಧಾರಣ ಕೊಡುಗೆಗಾಗಿ `ಜೀವಮಾನ ಸಾಧನೆ ಪ್ರಶಸ್ತಿ’ ನೀಡಲಾಯಿತು.

ಡಾ. ಬಿ. ಶಾಂತಾರಾಮ್ ಬಾಳಿಗಾ ಒಬ್ಬ ಹಿರಿಯ ನವಜಾತಶಾಸ್ತ್ರಜ್ಞರಾಗಿದ್ದು, ಅವರು ಸುಮಾರು ಮೂರು ದಶಕಗಳಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದಾರೆ. ಲೇಡಿ ಗೊಶೆನ್ ಆಸ್ಪತ್ರೆಯಲ್ಲಿ ಎನ್‍ಐಸಿಯು ಮತ್ತು ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪಿಐಸಿಯು ಅನ್ನು ಆಧುನಿಕ ಉನ್ನತ ಮಟ್ಟದ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮಂಗಳೂರಿನಲ್ಲಿ ಪ್ರಾದೇಶಿಕ ಸುಧಾರಿತ ಮಕ್ಕಳ ಆರೈಕೆ ಕೇಂದ್ರವನ್ನು (ಖಂPಅಅ) ರಚಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದನ್ನು ಮಾದರಿ ಸೌಲಭ್ಯವೆಂದು ಪರಿಗಣಿಸಲಾಗಿದೆ. ಈ ವರ್ಷ ಆಸ್ಪತ್ರೆಯ ನವೀಕರಣಕ್ಕೆ ಒಳಗಾದ ನಂತರ ಅವರು ಲೇಡಿ ಗೊಶೆನ್ ಆಸ್ಪತ್ರೆಯಲ್ಲಿ ಹೊಸ ಎನ್‍ಐಸಿಯು ಅನ್ನು ಕಲ್ಪಿಸಿದ್ದಾರೆ. ಹೊಸ ಎನ್‍ಐಸಿಯು ಅನ್ನು ಕಾಪೆರ್Çರೇಟ್ ಆಸ್ಪತ್ರೆಗಳಿಗೆ ಸಮನಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಬಡ ರೋಗಿಗಳಿಗೆ ವರದಾನವಾಗಿದೆ.

ಡಾ. ಬಿ. ಶಾಂತಾರಾಮ್ ಬಾಳಿಗಾ ಅವರು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ರಾಷ್ಟ್ರೀಯ ನಿಯೋನಾಟಾಲಜಿ ಫೆÇೀರಮ್‍ನ ಕರ್ನಾಟಕ ರಾಜ್ಯ ಅಧ್ಯಾಯದ ಅಧ್ಯಕ್ಷರೂ ಆಗಿದ್ದರು. ಅವರು ದೇಶದಲ್ಲಿ ಮಕ್ಕಳ ಆರೋಗ್ಯವನ್ನು ಸುಧಾರಿಸಲು ವಿವಿಧ ಸರ್ಕಾರಿ ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಡಾ. ಬಿ. ಶಾಂತಾರಾಮ್ ಬಾಳಿಗಾ ಅವರು ಮಂಗಳೂರು ಮಹಾನಗರಪಾಲಿಕೆಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದೊಂದಿಗೆ `90 ರ ದಶಕದ ಆರಂಭದಿಂದ ಸಂಬಂಧ ಹೊಂದಿದ್ದಾರೆ. ಇತ್ತೀಚೆಗೆ ಅವರ ಪರಿಕಲ್ಪನೆ ಮತ್ತು ಪರಿಶ್ರಮದಿಂದ ಮಹಾನಗರಪಾಲಿಕೆಯ ಮಲೇರಿಯಾ ನಿಯಂತ್ರಣ ಸಾಫ್ಟ್‍ವೇರ್ ಅನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು, ಇದು ನಗರದಲ್ಲಿ ಮಲೇರಿಯಾವನ್ನು ಬಿಗಿಯಾಗಿ ನಿಯಂತ್ರಣ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದೆ.

ಆರೋಗ್ಯ ಇಲಾಖೆಯಿಂದ ರಾಜ್ಯದಾದ್ಯಂತ 19 ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ನವಜಾತ ಆರೈಕೆ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಕಾರ್ಯಕ್ರಮವನ್ನು ಅವರು ಮುನ್ನಡೆಸಿದರು. ಅವರ ಪಾತ್ರವು ಪೂರ್ಣ ಪ್ರಮಾಣದ ಶಿಶುಪಾಲನಾ ಘಟಕಗಳನ್ನು ಸ್ಥಾಪಿಸುವುದು ಮತ್ತು ಸಿಬ್ಬಂದಿಗೆ ತರಬೇತಿ ನೀಡುವುದು. ಇದು ಸಾವಿರಾರು ಬಡ ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ ಮತ್ತು ಅಸಂಖ್ಯಾತ ಜೀವಗಳನ್ನು ಉಳಿಸಿದೆ. ಈ ಘಟಕಗಳಲ್ಲಿ ವಾರ್ಷಿಕವಾಗಿ ಸುಮಾರು 5-6000 ಶಿಶುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.


Spread the love