ತಲೆಸುತ್ತು ಬಂದು ಸ್ಟಿಯರಿಂಗ್ ಕೈಬಿಟ್ಟ ಚಾಲಕ: ನದಿ ಪಾಲಾಗುತ್ತಿದ್ದ 25 ಮಂದಿ ರಕ್ಷಿಸಿದ ಕಂಡಕ್ಟರ್

Spread the love

ತಲೆಸುತ್ತು ಬಂದು ಸ್ಟಿಯರಿಂಗ್ ಕೈಬಿಟ್ಟ ಚಾಲಕ: ನದಿ ಪಾಲಾಗುತ್ತಿದ್ದ 25 ಮಂದಿ ರಕ್ಷಿಸಿದ ಕಂಡಕ್ಟರ್

ಶಿವಮೊಗ್ಗ: ಶಿವಮೊಗ್ಗದಿಂದ ಮಂಗಳೂರು ಕಡೆ ಹೊರಟಿದ್ದ ಕ್ರಿಸ್ತರಾಜ ಬಸ್‍ನ ಪ್ರಯಾಣಿಕರು ಜಲಸಮಾಧಿಯಾಗುತ್ತಿದ್ದರು. ಆದರೆ ಕಂಡಕ್ಟರ್​ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಸುಮಾರು 25 ಮಂದಿಯ ಪ್ರಾಣ ಉಳಿದಿದೆ.

ಇಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ನಿರ್ವಾಹಕ ಭಗವಾನ್ ಸಮಯಪ್ರಜ್ಞೆಯ ಮೂಲಕ ಪ್ರಯಾಣಿಕರನ್ನು ದೇವರಂತೆ ಕಾಪಾಡಿದ್ದಾರೆ.

ಇಂದು ಮಳೆ ಪುನಃ ಆರಂಭವಾಗಿದೆ. ಮಂಡಗದ್ದೆ ಸಮೀಪ ರಸ್ತೆಯೆಲ್ಲಾ ಜಾರುಬಂಡೆಯಾಗಿದೆ. ಇಂತಹ ಸಮಯದಲ್ಲಿ ಇಲ್ಲಿನ ಅಪಘಾತ ವಲಯ 17ನೇ ಮೈಲುಗಲ್ಲು ಬಳಿ ಬಂದ ಕಿಸ್ತರಾಜ’ ಬಸ್‍ಗೆ ಗ್ರಹಚಾರ ಕಾದಿತ್ತು. ಬಸ್‍ನ ಚಾಲಕ ಅಪ್ಸರ್​​​ಗೆ ತಲೆಸುತ್ತು ಬಂದು ಬಸ್ ಸ್ಟೀಯರಿಂಗ್ ಕೈಬಿಟ್ಟಿದ್ದರು. ಉಡುಪಿ-ಮಂಗಳೂರು ಬಸ್ ಆಗಿದ್ದರಿಂದ ಟಿಕೆಟ್ ಮಾಡಿ ಮುಗಿಸಿದ್ದ ಕಂಡಕ್ಟರ್ ಭಗವಾನ್, ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ಅವಘಡಕ್ಕೆ ತುತ್ತಾಗುತ್ತಿದ್ದ ಬಸ್‍ನ್ನ ತಕ್ಷಣ ಸ್ಟೀಯರಿಂಗ್ ತಿರುಗಿಸಿದ್ದಾರೆ. ತುಂಗಾನದಿಯತ್ತ ಹೊರಳಿದ್ದ ಬಸ್‍ನ್ನ ತಿರುಗಿಸಿ ಸುಮಾರು 25 ಜನರ ಜೀವ ಉಳಿಸಿದ್ದಾರೆ.


Spread the love