ದಕ ಜಿಲ್ಲಾ ಬಿಜೆಪಿ ವತಿಯಿಂದ ಗೋಪೂಜೆ

Spread the love

ದಕ ಜಿಲ್ಲಾ ಬಿಜೆಪಿ ವತಿಯಿಂದ ಗೋಪೂಜೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ವತಿಯಿಂದ ದ.ಕ. ಜಿಲ್ಲಾ ಕಾರ್ಯಾಲಯ ಮುಂಭಾಗದಲ್ಲಿ ಗೋಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಗೋ ಸಂರಕ್ಷಣಾ ನಿಧಿ ಸಂಗ್ರಹ ಪಾದಯಾತ್ರೆಗೆ ಜಿಲ್ಲಾಧ್ಯಕ್ಷರಾದ ಶ್ರೀ ಸಂಜೀವ ಮಠಂದೂರು ರವರು ಚಾಲನೆ ನೀಡಿದರು.

ಗೋ ಸಂರಕ್ಷಣಾ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕರಾದ ರಾಜೇಶ್ ಶೆಟ್ಟಿ, ಪುಷ್ಪರಾಜ್ ಆಳ್ವ, ಮಂಗಳೂರು ನಗರ ದಕ್ಷಿಣ ಸಂಚಾಲಕರಾದ ಸುಧೀರ್ ಶೆಟ್ಟಿಗಾರ್, ಸಹ ಸಂಚಾಲಕರಾದ ರಾಜೇಶ ದೇವಾಡಿಗ, ಸಂಸದರಾದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಉಮಾನಾಥ್ ಕೋಟ್ಯಾನ್, ಕ್ಯಾ.ಬ್ರಿಜೇಶ್ ಚೌಟ, ಸುದರ್ಶನ್ ಎಂ,ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವೇದವ್ಯಾಸ ಕಾಮತ್, ಪ್ರಭಾಮಾಲಿನಿ, ಪೂಜಾ ಪೈ, ಜಯಂತಿ ಆಚಾರ್, ಪೂರ್ಣಿಮಾ ರಾವ್, ರೂಪ ಡಿ ಬಂಗೇರ, ಮೀರಾ ಕರ್ಕೇರ, ಪೂರ್ಣಿಮಾ, ಸಂಜಯ ಪ್ರಭು, ಗುರುಚರಣ್, ರವಿಶಂಕರ ಮಿಜಾರ್, ಕೆ ಮೋನಪ್ಪ ಭಂಡಾರಿ, ರುಕ್ಮಯ್ಯ ಪೂಜಾರಿ, ಕೃಷ್ಣಪ್ಪ ಪೂಜಾರಿ, ರಮೇಶ್ ಕಂಡೆಟ್ಟು, ಭಾಸ್ಕರ ಚಂದ್ರ ಶೆಟ್ಟಿ, ಜಿತೇಂದ್ರ ಕೊಟ್ಟಾರಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.


Spread the love