ನಮನ ವೆಂಕಟರಮಣ ಪಿತ್ರೋಡಿ ಯುವಕರಿಂದ ರಸ್ತೆ ಹೊಂಡಗಳನ್ನು ಮುಚ್ಚಲು ಶ್ರಮದಾನ

Spread the love

ನಮನ ವೆಂಕಟರಮಣ ಪಿತ್ರೋಡಿ ಯುವಕರಿಂದ ರಸ್ತೆ ಹೊಂಡಗಳನ್ನು ಮುಚ್ಚಲು ಶ್ರಮದಾನ

ಉಡುಪಿ: ಉದ್ಯಾವರ ಪಿತ್ರೋಡಿ ಮೀನುಗಾರಿಕಾ ರಸ್ತೆಯು ಸಾರ್ವಜನಿಕರ ಸಂಚಾರಕ್ಕೆ ಸಂಕಷ್ಟಕರವಾಗಿರುವುದನ್ನು ಮನಗೊಂಡ ನಮನ ವೆಂಕಟರಮಣ ಪಿತ್ರೋಡಿ ಇದರ ಸದಸ್ಯರು ಯಶಸ್ವಿ ಫಿಶ್ ಮಿಲ್ & ಆಯಿಲ್ ಕಂಪೆನಿ ಇದರ ಮುಂದಾಳತ್ವದಲ್ಲಿ ರಸ್ತೆಯ ಹೊಂಡಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುಗುಣವಾಗಿ “ಶ್ರಮದಾನ” ಕಾರ್ಯಕ್ರಮ ನಡೆಸಿದರು.

ತಂಡದ ಅಧ್ಯಕ್ಷರಾದ ಸಂದೀಪ್ ಮೆಂಡನ್, ಸಂಚಾಲಕರಾದ ಗಿರೀಶ್ ವಿ ಸುವರ್ಣ, ಸದಸ್ಯರುಗಳಾದ ಗಂಗಾಧರ ವಿ ಸುವರ್ಣ, ರಾಜೇಶ್ ಶ್ರೀಯಾನ್, ರವಿರಾಜ್ ಶ್ರೀಯಾನ್, ಸೂರಜ್ ಮೆಂಡನ್, ಚಿಂತನ್ ಕುಮಾರ್, ಪ್ರತೀಶ್ ಸಾಲ್ಯಾನ್,ಶಶಿಕಾಂತ್, ದಿಲೀಪ್, ಅಕ್ಷಯ್ ಕುಮಾರ್, ಅಕ್ಷತ್ , ನಿಖಿಲ್ ಕೋಟ್ಯಾನ್ ಶ್ರಮದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love