ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ

Spread the love

ಪಾವೂರಿನಲ್ಲಿ ಜ್ಯೂಸ್ ಅಂಗಡಿ ಮಾಲಿಕನಿಗೆ ಚೂರಿ ಇರಿತ

ಮಂಗಳೂರು: ಅಂಗಡಿ ಮಾಲೀಕರಿಗೆ ಐದು ಮಂದಿಯ ತಂಡ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಹರೇಕಳ ಕಡವಿನ ಬಳಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ.

ಕೊಲೆ ಯತ್ನಕ್ಕೆ ಒಳಗಾದವರುನ್ನು ಪಾವೂರು ನಿವಾಸಿ ಅಬ್ದುಲ್ ರಹಿಮಾನ್ (35) ಎಂದು ಗುರುತಿಸಲಾಗಿದ್ದು, ಅವರು ಪಾವೂರು ಕಡವಿನ ಬಾಗಿಲು ಬಳಿ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದಾರೆ.

ಮಂಗಳವಾರ ರಾತ್ರಿ ತನ್ನ  ಜ್ಯೂಸ್ ಅಂಗಡಿಯನ್ನು ಮುಚ್ಚಲು ಅನುವಾಗುತ್ತಿದ್ದ ಸಂದರ್ಭದಲ್ಲಿ  ಓಮ್ನಿ ಕಾರಿನಲ್ಲಿ ಬಂದ ಐದು ಮಂದಿಯ  ತಂಡ ಚೂರಿಯಿಂದ ತಲೆ, ಕಾಲು ಹಾಗೂ ಕೈಗಳ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಲಾಗಿದೆ. ಸ್ಥಳೀಯವಾಗಿ ಗಾಂಜಾ ವ್ಯಸನಿಗಳ ಉಪಟಳದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕಾಗಿ ಹಂಚು ಹಾಕಿದ್ದ ತಂಡ ಕೃತ್ಯ ಎಸಗಿದೆ.

ಗಾಯಾಳುವನ್ನು ನಾಟೆಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love