ಪುತ್ತೂರು: ರೈಲ್ವೇ ಮೇಲ್ಸೇತುವೆಗೆ ಬೈಕ್ ಡಿಕ್ಕಿ – ಮೆಸ್ಕಾಂ ಉದ್ಯೋಗಿ ಸಾವು

Spread the love

ಪುತ್ತೂರು: ರೈಲ್ವೇ ಮೇಲ್ಸೇತುವೆಗೆ ಬೈಕ್ ಡಿಕ್ಕಿ – ಮೆಸ್ಕಾಂ ಉದ್ಯೋಗಿ ಸಾವು

ಪುತ್ತೂರು: ರೈಲ್ವೇ ಮೇಲ್ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂ ಇಲಾಖೆಯ ಉದ್ಯೋಗಿಯೊಬ್ಬರು ಮೃತಪಟ್ಟ ಘಟನೆ ಪುತ್ತೂರಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಕೋಡಿಂಬಾಡಿ ಭಂಡಾರದ ಮನೆ ನಿವಾಸಿ ವಸಂತ ಗೌಡ (40) ಎಂದು ಗುರುತಿಸಲಾಗಿದೆ. ಮೃತರು ಮೆಸ್ಕಾಂ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತರು ತಂದೆ ತಾಯಿ, ಪತ್ನಿ ಹಾಗೂ ಹೆಣ್ಣು ಮಗುವನ್ನು ಅಗಲಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಘಾತವು ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ನಡೆದಿದ್ದು, ಎದುರಿನಿಂದ ಬರುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಸಂತ ಗೌಡ ಅವರು ತಮ್ಮ ಬೈಕನ್ನು ಎಡಗಡೆಗೆ ತಿರುಗಿಸಿದಾಗ ನಿಯಂತ್ರಣ ತಪ್ಪಿದ ಬೈಕ್ ರೈಲ್ವೆ ಮೇಲ್ಸೇತುವೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


Spread the love