ಪ್ರಚೋದನಾಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕ – ಜೆಪಿ ಹೆಗ್ಡೆ

Spread the love

ಪ್ರಚೋದನಾಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕ – ಜೆಪಿ ಹೆಗ್ಡೆ

ಚಿಕ್ಕಮಗಳೂರು: ಅಭಿವೃದ್ಧಿ ಮೊಟಕುಗೊಳಿಸಿ ಟೀಕಾ ಪ್ರಹಾರಕ್ಕೆ ಮಾತ್ರ ಹಾಲಿ ಸಂಸದರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ದ್ವೇಷಭರಿತ ಮಾತುಗಳನ್ನಾಡಿರುವ ಪರಿಣಾಮ ಕ್ಷೇತ್ರ ಹಲವಾರು ಸಮಸ್ಯೆಗಳಿಗೆ ಸಿಲುಕಿಕೊಂಡಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಆರೋಪಿಸಿದರು.

ಅವರು ತಾಲೂಕಿನ ಹರಿಹರದಹಳ್ಳಿ, ಮರ್ಲೆ ಹಾಗೂ ಮುಗಳುವಳ್ಳಿ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಸಂಬಂಧ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ.

ರೈತರು ಬೆಳೆಗಾರರಿಗೆ ಪರಿಹಾರ ಹಾಗೂ ಬಡ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದೇ ಪ್ರಚೋದನಾಕಾರಿ ಹೇಳಿಕೆ ನೀಡುವುದೇ ಹಾಲಿ ಸಂಸದರ ಕಾಯಕವಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧೀಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಕ್ಷೇತ್ರದಲ್ಲಿ ಇಲ್ಲಸಲ್ಲದ ಘಟನೆಗಳಿಗೆ ಉತ್ತರಿಸಲೆಂದೇ ಆಗಮಿಸುವ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವರೇ ಎಂದು ಪ್ರಶ್ನಿಸಿದರು.

ದಶಕಗಳಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ ಈ ಭಾಗಕ್ಕೆ ಸಂಸದರ ನಿಧಿಯಿಂದ ಹಣ ಬಿಡುಗಡೆಗೊಳಿಸಿಲ್ಲ. ಚುನಾವಣೇ ಸಮೀಪಿಸುವ ವೇಳೆ ಮಾತ್ರ ನಾಯಕರ ಹೆಸರಿನಲ್ಲಿ ಮತಗಳಿಸುವ ಬಿಜೆಪಿ ಮುಖಂಡರು ಬಳಿಕ ಕೆಲಸ ಮಾಡಬೇಕೆನ್ನುವ ಸೋಮಾರಿತನದ ಮನಸ್ಥಿತಿ ಅವರಲ್ಲಿದೆ ಎಂದರು.

ಕಳೆದ ತಮ್ಮ ಅಧಿಕಾರವಧಿಯಲ್ಲಿ ಚಿಕ್ಕಮಗಳೂರಿಗೆ ರೈಲ್ವೆ ಅಭಿವೃದ್ಧಿಗೊಳಿಸಿ ಪ್ರತಿನಿತ್ಯ ಒಂದು ರೈಲು ಸಂಚರಿಸಲಾಗುತ್ತಿತ್ತು. ಇಂದಿಗೂ ಒಂದು ರೈಲು ಎರಡಾಗಲಿಲ್ಲ ಎಂದು ಆರೋಪಿಸಿದ ಅವರು ದಿನೋಪಯೋಗಿ ವಸ್ತುಗಳ ಬೆಲೆ ಏರಿಸುವುದ ರೈತರ ಜೀವನದ ಜೊತೆ ಚೆಲ್ಲಾಟವಾಡುವುದೇ ಬಿಜೆಪಿ ಧ್ಯೇಯವಾಗಿದೆ ಎಂದರು ದೂರಿದರು.

ರಾಜ್ಯ ಸರ್ಕಾರ ಪಂಚಗ್ಯಾರಂಟಿ ಅನುಷ್ಠಾನಗೊಳಿಸಿ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆ ಜೀವಿಸಲು ಅವಕಾಶ ಮಾಡಿಕೊಟ್ಟಿದೆ. ಇವುಗಳನ್ನು ಬಿಟ್ಟಿ ಭಾಗ್ಯವೆಂದು ಟೀಕಿಸುವ ಬಿಜೆಪಿ ಮುಖಂಡರು ಕೇಂದ್ರದಿಂದ ರಾಜ್ಯಕ್ಕೆ ನೀಡಿರುವ ಶಾಶ್ವತ ಕೊಡುಗೆಗಳು ಏನೆಂದು ತಿಳಿಸಬೇಕು. ಕ್ಷೇತ್ರದ ಜನತೆಗೆ ಸುಳ್ಳು ಭರವಸೆ ನೀಡುವ ಪಕ್ಷಕ್ಕೆ ಅಧಿಕಾರ ನೀಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.

ಮಾಜಿ ಶಾಸಕ ಎಂಪಿ ಕುಮಾರಸ್ವಾಮಿ ಮಾತನಾಡಿ ಬಿಜೆಪಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾ ಪೈಸೆ ಅನುದಾನ ನೀಡಿಲ್ಲ ಭೀಕರ ಬರಗಾಲದಲ್ಲಿ ರೈತರು ಹಾಗೂ ಬೆಳೆಗಾರರಿಗೆ ಪರಿಹಾರ ಒದಗಿಸದೆ ಕಂಗಾಲಾಗಿಸಿರುವುದು ಬಿಜೆಪಿ ಇವರಿಗೆ ಮತ ಕೇಳು ನೈತಿಕತೆ ಇಲ್ಲ ಎಂದು ದೂರಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಪ್ರತಿನಿತ್ಯ 37 ಲಕ್ಷ ಮಂದಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಬಸ್ ನಲ್ಲಿ ಸಂಚರಿಸುತ್ತಿದ್ದಾರೆ ಇಂಥ ಜನೋಪಯೋಗಿ ಯೋಜನೆ ಜಾರಿಗೆಗೊಳಿಸುವ ಬದಲು ಕೇಂದ್ರ ಸರ್ಕಾರ ಸಾರ್ವಜನಿಕ ತೆರಿಗೆ ಹಣದಿಂದ ಉದ್ಯಮಿಗಳ ಸಾಲಮನ್ನಾ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಡಿ ಸಿ ಶ್ರೀಕಂಠಪ್ಪ, ಸದಾನಂದ ಗೌಡ ಹಾಗೂ ಶೋಭಾ ಕರಂದ್ಲಾಜೆ ಮೂವರು 28 ವರ್ಷಗಳಿಂದ ಅಧಿಕಾರ ನಡೆಸಿದರೂ ಶಾಶ್ವತ ಕಾಮಗಾರಿಗಳು ಕೈಗೊಂಡಿಲ್ಲ. ಸರಳ ಸಜ್ಜನಿಕೆಯ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಕ್ಷೇತ್ರದ ಜನರಲ್ಲಿ ಉತ್ತಮ ಭಾಂಧವ್ಯ ಹೊಂದಿದ್ದಾರೆ. ಸಂಕಷ್ಠದ ಕ್ಷಣಗಳಲ್ಲಿ ಸ್ಪಂದಿಸುವ ಗುಣ ಅವರಲ್ಲಿದೆ ಆ ನಿಟ್ಟಿನಲ್ಲಿ ಕಾಂಗ್ರೆಸ್ ಬದುಕು ಕಟ್ಟಿಕೊಡುವ ಮೂಲಕ ನ್ಯಾಯ ಸಮ್ಮತವಾಗಿ ಮತ ಕೇಳುತ್ತಿದೆಯೇ ಹೊರತು ಎಂದಿಗೂ ವಿಷಬೀಜ ಬಿತ್ತಿ ರಾಜಕೀಯ ಮಾಡುತ್ತಿಲ್ಲ ಎಂದರು.


Spread the love

Leave a Reply