ಪ್ರಮೋದ್ ವಿರುದ್ದ ಶ್ರೀನಿವಾಸ್ ಪ್ರಸಾದ್ ಆರೋಪಕ್ಕೆ ಚುನಾವಣೆ ಫಲಿತಾಂಶದಿಂದ ತಕ್ಕ ಉತ್ತರ: ಕಾಂಗ್ರೆಸ್

Spread the love

ಪ್ರಮೋದ್ ವಿರುದ್ದ ಶ್ರೀನಿವಾಸ್ ಪ್ರಸಾದ್ ಆರೋಪಕ್ಕೆ ಚುನಾವಣೆ ಫಲಿತಾಂಶದಿಂದ ತಕ್ಕ ಉತ್ತರ: ಕಾಂಗ್ರೆಸ್

ಉಡುಪಿ: ನಂಜನಗೂಡು ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ರವರು ಬಹಿರಂಗ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್‍ರವರ ಮೇಲೆ ಮಾಡಿದ ಆಪಾದನೆಗೆ ಉಪ ಚುನಾವಣೆಯ ಫಲಿತಾಂಶವು ತಕ್ಕ ಉತ್ತರ ನೀಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ

ಸಜ್ಜನ ಸಚ್ಛಾರಿತ್ರ್ಯದ ರಾಜಕಾರಣಿ ಪ್ರಮೋದ್ ಮಧ್ವರಾಜ್‍ರವರ ಚಾರಿತ್ರ್ಯ ಹರಣ ಮಾಡುವ ಬಿ.ಜೆ.ಪಿಯ ಅಪ ಪ್ರಚಾರಕ್ಕೆ ಜನ ಬೆಂಬಲ ನೀಡುವುದಿಲ್ಲ ಎಂದು ಸಾಬೀತಾಗಿದೆ. ರಾಜ್ಯದ ಕಾಂಗ್ರೆಸ್ ಪಕ್ಷದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯರವರ ನೇತೃತ್ವದ ಜನಪರ ಕಾರ್ಯಗಳೇ ಶ್ರೀ ರಕ್ಷೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕರೆ, ಕೆ ಜನಾರ್ಧನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು, ರಮೇಶ್ ಕಾಂಚನ್, ಆರ್.ಕೆ ರಮೇಶ್ ಪೂಜಾರಿ, ಗಣೇಶ ನೆರ್ಗಿ, ನಾರಾಯಣ ಪಿ.ಕುಂದರ್, ಶೇಖರ ಜಿ.ಕೊಟ್ಯಾನ್, ಶಶಿರಾಜ್ ಕುಂದರ್, ಸುಖೇಶ್ ಕುಂದರ್, ಪ್ರಶಾಂತ ಪೂಜಾರಿ,ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love