ಬೆಂಗಳೂರು ಬಾರ್‌ ಮಾಲೀಕ ಮನೀಶ್‌ ಶೆಟ್ಟಿ ಹಂತಕರ ಬಂಧನ: ಇಬ್ಬರ ಕಾಲಿಗೆ ಗುಂಡು

Spread the love

ಬೆಂಗಳೂರು ಬಾರ್‌ ಮಾಲೀಕ ಮನೀಶ್‌ ಶೆಟ್ಟಿ ಹಂತಕರ ಬಂಧನ: ಇಬ್ಬರ ಕಾಲಿಗೆ ಗುಂಡು

ಬೆಂಗಳೂರು: ರಾಜ್ಯದ ಕರಾವಳಿ ರೌಡಿಸಂ ರಾಜಧಾನಿಗೆ ಮತ್ತೆ ಕಾಲಿಟ್ಟಿದ್ದು, ದ್ವೇಷದ ಹಿನ್ನೆಲೆಯಲ್ಲಿ ಬ್ರಿಗೇಡ್‌ ರಸ್ತೆಯಲ್ಲಿ ನೂರಾರು ಜನ, ವಾಹನಗಳ ಓಡಾಟದ ನಡುವೆ ರಾಜಾರೋಷವಾಗಿ ಬಾರ್‌ ಮಾಲೀಕನ ಮೇಲೆ ಗುಂಡು ಹಾರಿಸಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಅ.15ರಂದು ರಾತ್ರಿ 9ರ ಸುಮಾರಿಗೆ ಡುಯೆಟ್‌ ಬಾರ್‌ ಮಾಲೀಕ ಮನೀಶ್‌ ಶೆಟ್ಟಿಯನ್ನು (45) ಬಾರ್‌ ಎದುರೇ ಹತ್ಯೆ ಮಾಡಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ಕೊಡಗು ಸೋಮವಾರಪೇಟೆಯ ಶಶಿಕಿರಣ್‌ ಅಲಿಯಾಸ್‌ ಮುನ್ನ (45), ಮಂಗಳೂರಿನ ಗಣೇಶ (39), ಸೋಮವಾರಪೇಟೆಯ ನಿತ್ಯ(29) ಹಾಗೂ ಬಂಟ್ವಾಳದ ಅಕ್ಷಯ್‌ (32) ಬಂಧಿತರು.

ಕೃತ್ಯಕ್ಕೆ ಬಳಸಿದ್ದ ಮಚ್ಚುಗಳನ್ನು ವಶಪಡಿಸಿಕೊಳ್ಳಲು ಶನಿವಾರ ಸಂಜೆ 6.30ರಲ್ಲಿ ಹೊಸೂರು ರಸ್ತೆ ಬಾರ್‌ಲೇನ್‌ ಸ್ಮಶಾನದ ಬಳಿ ಆರೋಪಿಗಳಾದ ಶಶಿಕಿರಣ್‌ ಮತ್ತು ಅಕ್ಷಯ್‌ನನ್ನು ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಹಲ್ಲೆಮಾಡಿ ಪರಾರಿಯಾಗಲು ಯತ್ನಿಸಿದಾಗ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಅನುಚೇತ್‌ ತಿಳಿಸಿದರು


Spread the love