ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆಯ ಮಾಧ್ಯಮ ಕಾರ್ಯಾಗಾರ

Spread the love

ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆಯ ಮಾಧ್ಯಮ ಕಾರ್ಯಾಗಾರ

ಮಂಗಳೂರು : ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲೆಯ ಮಾಧ್ಯಮ ಕಾರ್ಯಾಗಾರ ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ರವರು ಈ ಕಾರ್ಯಗಾರವನ್ನು ಉದ್ಘಾಟಿಸಿ ಮಾಧ್ಯಮಗಳು ರಾಜಕೀಯ ಕ್ಷೇತ್ರದಲ್ಲಿ ಇವತ್ತು ಅತ್ಯಂತ ಪ್ರಬಲವಾದ ಪಾತ್ರವನ್ನು ನಿರ್ವಹಿಸುತ್ತದೆ. ಮತ್ತು ಈ ಸಾಧನವನ್ನು ಬಿಜೆಪಿಯ ಜಿಲ್ಲಾ ಮಾಧ್ಯಮ ವರ್ಗದವರು ಅತ್ಯಂತ ಪರಿಣಾಮಕಾರಿಯಾಗಿ ಬಳಸಬೇಕು. ಈ ಮಾಧ್ಯಮದ ಮುಖಾಂತರ ಬಿಜೆಪಿಯ ಕೇಂದ್ರ ಸರಕಾರದ ಸಾಧನೆಗಳನ್ನು ಮತ್ತು ಕಾಂಗ್ರೇಸ್ಸಿನ ರಾಜ್ಯ ಸರಕಾರದ ವೈಫಲ್ಯವನ್ನು ಜನತೆಗೆ ತಿಳಿಸಿ ಮುಂದಿನ ಚುನಾವಣೆಯನ್ನು ಎದುರಿಸಬೇಕೆಂದು ಕರೆ ನೀಡಿದರು.

ಈ ಕಾರ್ಯಾಗಾರದಲ್ಲಿ ರಾಜ್ಯ ವಕ್ತಾರರಾದ ಎಸ್. ಸುರೇಶ್ ಕುಮಾರ್ ಭಾಗವಹಿಸಿ ಪ್ರಸ್ತಾವನೆ ಬಾಷಣವನ್ನು ನಡೆಸಿಕೊಟ್ಟರು.ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಿದ ನವಕರ್ನಾಟಕ ಪರಿವರ್ತನಾ ರ್ಯಾಲಿಯನ್ನು ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಗೊಳಿಸಲು ಮಾಧ್ಯಮ ಕ್ಷೇತ್ರವನ್ನು ಬಳಸಿಕೊಳ್ಳಬೇಕೆಂಬ ಸಂದೇಶವನ್ನು ಪ್ರಸ್ತಾವನೆಯಲ್ಲಿ ಕರೆ ನೀಡಿದರು. ಜಿಲ್ಲೆಯ ಕ್ಷೇತ್ರಗಳ ಪ್ರಕೋಷ್ಠಗಳ ಪ್ರಮುಖರು ಮಾಧ್ಯಮಗಳನ್ನು ಯಾವ ರೀತಿಯಾಗಿ ರಾಜಕೀಯವಾಗಿ ಬಳಸಿಕೊಳ್ಳಬೇಕೆಂಬ ಮಾಹಿತಿಗಳನ್ನು ನೀಡಿದರು.

ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಪ್ರಮುಖರು, 9 ಕ್ಷೇತ್ರಗಳ ಮಾಧ್ಯಮದ ಪ್ರಮುಖರು ಬೇರೆ ಬೇರೆ ಪ್ರಕೋಷ್ಠಗಳ ಸಂಚಾಲಕರು ಭಾಗವಹಿಸಿ ಮಾಹಿತಿ ಪಡಕೊಂಡರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಶ್ರೀಮೋನಪ್ಪ ಭಂಡಾರಿಯವರು,ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು,ರಾಜ್ಯ ಸಹ ವಕ್ತಾರೆ ಸುಲೋಚನಾ ಭಟ್, ಜಿಲ್ಲಾ ವಕ್ತಾರರಾದ ಜಿತೇಂದ್ರ ಕೊಟ್ಟಾರಿ, ವಿಕಾಸ್ ಪುತ್ತೂರು,ಕೃಷ್ಣರಾಜ್ ಹೆಗಡೆ ಮತ್ತು ಜಿಲ್ಲಾ ಮಾದ್ಯಮ ಪ್ರಮುಖ್ ರಾಜೇಶ್ ಕೊಟ್ಟಾರಿಯವರು ಉಪಸ್ಥಿತಿಯಿದ್ದರು.


Spread the love